ಬಾಗಲಕೋಟೆ : ಸಚಿವರ ಎದುರೇ ಕಾಂಗ್ರೆಸ್ VS ಬಿಜೆಪಿ ಕಾರ್ಯಕರ್ತರ ಜಟಾಪಟಿ..ವಾಗ್ವಾದ.. ಗಲಾಟೆ…
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸಚಿವ ಆರ್ ಬಿ ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಜಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿಯಾದ ಘಟನೆ ನಡೆದಿದೆ
ಬಿಜೆಪಿ ಶಾಸಕರ ಜೊತೆ ಏಕವಚನದಲ್ಲೇ ವಾಗ್ವಾದಕ್ಕಿಳಿದ ಕೈ ಮುಖಂಡರು ಸಚಿವ ಆರ್.ಬಿ.ತಿಮ್ಮಾಪೂರ ನೇತೃತ್ವದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ.ಬಿಜೆಪಿ ಕಾಂಗ್ರೆಸ್ ಮಧ್ಯೆ ಪ್ರೋಟೋಕಾಲ್ ಪೊಲಿಟಿಕ್ಸ್.ಮಾಜಿಗಳನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬ್ಯಾನರ್ ಹಾಕಲು ಅನುಮತಿಸಿದ್ದಕ್ಕೆ ಗರಂ ಆದ ಕಾರ್ಯಕರ್ತರು ಕಾಂಗ್ರೆಸ್ ನ ಮಾಜಿ ಶಾಸಕ ಆನಂದ ನ್ಯಾಮಗೌಡರನ್ನ ಆಹ್ವಾನಿಸಿದ್ದಕ್ಕೆ ಬಿಜೆಪಿ ಶಾಸಕರು ಗರಂ ಆದರು ಇತ್ತ ಜಮಖಂಡಿ ನಗರಸಭೆ ಅಧ್ಯಕ್ಷರ ಹೆಸರು ಉದ್ಘಾಟನಾ ಫಲಕದ ಮೇಲೆ ಇಲ್ಲದೇ ಇರೋದಕ್ಕೆ ಸಚಿವರ ಎದುರೇ ಜಟಾಪಟಿ. ನಡೆಯಿತು
ಜಮಖಂಡಿ ನಗರದಲ್ಲಿ ಕೃಷಿ ಇಲಾಖೆಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ ಬಿಜೆಪಿ ಕಾಂಗ್ರೆಸ್ಸಿಗರ ಗಲಾಟೆ ಹಿನ್ನೆಲೆಯಲ್ಲಿ ಗದ್ದಲ ಗೊಂದಲದ ಗೂಡಾಗಿದ್ದರಿಂದ ವೇದಿಕೆ ಕಾರ್ಯಕ್ರಮವೇ ರದ್ದಾಯಿತು ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಎಪಿಎಂಸಿ ಸದಸ್ಯರು ಹರಿಹಾಯ್ದು ಪರಸ್ಪರ ವಾಗ್ವಾದದಿಂದಾಗಿ ಮುಖಂಡರು ಮುಜಗರಕ್ಕೀಡಾದರು
ಪರಿಸ್ಥಿತಿ ತಿಳಿಗೊಳಿಸಲು ಪೋಲಿಸರು & ತಹಶೀಲ್ದಾರರು ಮಧ್ಯ ಪ್ರವೇಶ ಮಾಡಿದರು
ಪ್ರೋಟೋಕಾಲ್ ಅನುಸರಿಸದ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ
ತೇರದಾಳ ಶಾಸಕ ಸಿದ್ದು ಸವದಿ & ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಆಗ್ರಹ ಮಾಡಿದರು.