ಸರ್ವರಲ್ಲೂ ಒಳ್ಳೆಯ ವಿಚಾರಗಳನ್ನು ಕಲಿತು ಜ್ಞಾನಿಗಳಾಗಬೇಕು…
ಮರಾಠಿಯ ಮಾತು ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಆರ್.ಸಿ.ಯು ಕುಲಗುರು ಸಿ.ಎಂ. ತ್ಯಾಗರಾಜ್
ಎಲ್ಲ ಕ್ಷೇತ್ರಗಳಲ್ಲೂ ಉತ್ಸಾಹದಿಂದ ಭಾಗವಹಿಸಿ ಎಲ್ಲವನ್ನು ಕಲಿತುಕೊಂಡು ಜ್ಞಾನಿಗಳಾಗಬೇಕು ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಗುರುಗಳಾದ ಪ್ರಾಧ್ಯಾಪಕ ಸಿ.ಎಂ. ತ್ಯಾಗರಾಜ್ ಅವರು ಹೇಳಿದರು.
ಬೆಳಗಾವಿ ಶಹಾಪೂರದ ಶ್ರೀ ಸರಸ್ವತಿ ವಾಚನಾಲಯದ ವತಿಯಿಂದ ರಾಜ್ಯ ಮರಾಠಿ ವಿಕಾಸ್ ಸಂಸ್ಥೆ ಅನುವಾದ ಯೋಜನೆಯಡಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮರಾಠಿಚ್ಯಾ ಬೋಲಿ ಅರ್ಥಾತ್ ಮರಾಠಿಯ ಮಾತು ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲಗೋಷ್ಟಿಯನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಗುರುಗಳಾದ ಪ್ರಾಧ್ಯಾಪಕ ಸಿ.ಎಂ. ತ್ಯಾಗರಾಜ್ ಅವರು ಉದ್ಘಾಟಿಸಿದರು. ಸರಸ್ವತಿ ವಾಚನಾಲಯದ ಅಧ್ಯಕ್ಷೆ ಪ್ರಾಧ್ಯಾಪಕಿ ಸ್ವರೂಪಾ ಇನಾಮದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಮರಾಠಿ ಭಾಷಾ ಪ್ರಮುಖರಾದ ಡಾ. ವಿನೋದ ಗಾಯಕವಾಡ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಗುರುಗಳಾದ ಪ್ರಾಧ್ಯಾಪಕ ಸಿ.ಎಂ. ತ್ಯಾಗರಾಜ್ ಅವರು ಎಲ್ಲ ಕ್ಷೇತ್ರಗಳಲ್ಲೂ ಉತ್ಸಾಹದಿಂದ ಭಾಗವಹಿಸಿ ಎಲ್ಲವನ್ನು ಕಲಿತುಕೊಂಡು ಜ್ಞಾನಿಗಳಾಗಬೇಕು ಎಂದು ಕರೆ ನೀಡಿದರು.
ಇನ್ನು ಸರಸ್ವತಿ ವಾಚನಾಲಯದ ಅಧ್ಯಕ್ಷೆ ಪ್ರಾಧ್ಯಾಪಕಿ ಸ್ವರೂಪಾ ಇನಾಮದಾರ್ ಅವರು ಒಳ್ಳೆಯದನ್ನ ಬಯಸಿದರೇ, ಎಲ್ಲವು ಒಳ್ಳೆಯದೇ ಆಗುತ್ತದೆ. ನಿಮ್ಮ ಪ್ರಗತಿ ನಿಮ್ಮ ಕೈಯಲ್ಲಿದೆ. ಬದಲಾವಣೆಯ ಕೀಲಿ ಕೈ ನಿಮ್ಮ ಬಳಿಯೇ ಇದೆ. ದೇಹವೇ ಪರಮಾತ್ಮ, ಅದರ ಕಾರ್ಯವೇ ಮಹತ್ಕಾರ್ಯವೆಂದರು.
ಇನ್ನು ಪ್ರಾಧ್ಯಾಪಕರಾದ ಡಾ. ಚಂದ್ರಕಾಂತ ವಾಘಮೋರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಗೋಷ್ಟಿಯಲ್ಲಿ ಪ್ರಾಧ್ಯಾಪಕಿ ಡಾ. ಮನೀಷಾ ನೇಸರಕರ ಅವರು ಉಪನ್ಯಾಸ ನಡೆಯಿತು. ಮೂರನೇ ಗೋಷ್ಟಿಯಲ್ಲಿ ವಿದ್ಯಾರ್ಥಿಗಳಿಂದ ಆಡು ಭಾಷೆಯಲ್ಲಿ ಪ್ರಸ್ತುತಿ ನಡೆಯಿತು. ಈ ವೇಳೆ ವಿಜಯಕುಮಾರ ದಳವಿ, ಸ್ವರೂಪಾ ಇನಾಮದಾರ, ಡಾ. ವಿನೋದ ಗಾಯಕವಾಡ, ಮೈಜುದ್ದೀನ ಮುತವಲ್ಲಿ, ಡಾ. ಸಂಜಯ ಕಾಂಬಳೆ, ಸುಹಾಸ್ ಸಾಂಗಲೀಕರ, ಆರ್.ಎಂ.ಕರಡಿಗುದ್ದಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.