ಮೈಕ್ರೋ ಪೈನಾನ್ಸ್ ಕಿರುಕುಳಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ರಾಜ್ಯದಲ್ಲಿ ಜನರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಊರು ಬಿಟ್ಟು ಹೋಗೋದು ಒಂದೆಡೆಯಾದ್ರೆ ಕೆಲವು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ,ಹೀಗಾಗಿ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೇ ಅಂಕುಶ ಹೇರಲು ಮುಂದಾಗಿದೆ,ಆದ್ರೆ ಇಲ್ಲೆದರ ನಡುವೆ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ.
ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಈತನ ಹೆಸರು ಮಾಬಲಿ ಅಂತಾ ಕಮರಿಪೇಟ್ ನಿವಾಸಿ ಈತ ಕಳೆದ 4 ವರ್ಷಗಳ ಹಿಂದೆ ವಿವಿಧ ಪೈನಾನ್ಸ್ ನಲ್ಲಿ ಸಾಲವನ್ನು ಮಾಡಿದ್ದ,ಅದೇ ರೀತಿ ಸಾಲವನ್ನು ತೀರಿಸಿಕೊಂಡು ಬರುತ್ತಿದ್ದ ಆದ್ರೆ ಕಳೆದ ಮೂರು ತಿಂಗಳಿಂದ ಅನಾನುಕೂಲ ಆಗಿ ಸಾಲ ಮರುಪಾವತಿ ಮಾಡಲು ಆಗಿದ್ದಿಲ್ಲ,ಹೀಗಾಗಿ ಪೈನಾನ್ಸ್ ನವರು ನಮಗೆ ದುಡ್ಡು ಬೇಕೇ ಬೇಕು ಎಂದು ಮನೆಗೆ ಬಂದು ಕಿರುಕುಳ ಕೊಡಲು ಶುರು ಮಾಡಿದ ಬೆನ್ನಲ್ಲೇ ಮಾಬುಲಿ ಬುಧವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Laxmi News 24×7