ಚಿಕ್ಕೋಡಿ:ಲೋಕಕಲ್ಯಾಣಕ್ಕಾಗಿ ಹಾಗೂ ಭಕ್ತರ ಪಾಪಗಳು ನಿವಾರಣೆಯಾಗಿ ಸಕಲ ಸುಖ ಪ್ರಾಪ್ತಿಯಾಗಲೆಂದು ಶ್ರೀಶೈಲ್ ಜಗದ್ಗುರು ಡಾ!ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಸಕಲ ಭಕ್ತಾದಿಗಳೊಂದಿಗೆ ಪುಣ್ಯಸ್ಥಾನ ಜರುಗಿತು.

ಇಂದು ಸಂಕ್ರಾತಿ ದಿನದಂದು ಸೂರ್ಯನೂ ದಕ್ಷಿಣದಿಂದ-ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸುವ ಶುಭದಿನ.ಭಕ್ತರು ಸಂಕ್ರಾಂತಿ ದಿನದಂದು ಪುಣ್ಯಕ್ಷೇತ್ರಗಳ ನದಿಯ ತೀರದಲ್ಲಿ ಜದ್ಗುರುಗಳ ಪಾದದಿಂದ ನೀರು ಹಾಕಿಕೊಳ್ಳುವುದರಿಂದ ಭಕ್ತರ ಸಕಲ ತೊಂದರೆಗಳು ನಿವಾರಣೆಯಾಗಿ,ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಲೋಕಕಲ್ಯಾಣಕ್ಕಾಗಿ ಶ್ರೀಶೈಲ್ ಜದ್ಗುರುಗಳ ಲೋಕಕಲ್ಯಾಣಕ್ಕಾಗಿ ಕೃಷ್ಣಾನದಿಯ ತೀರದಲ್ಲಿ ಪುಣ್ಯ ಜರುಗಿತು ಹಾಗೂ ಸುಮಾರು 2 ಸಾವಿರ ಭಕ್ತರು ಕೃಷ್ಣಾನದಿಯಲ್ಲಿ ಸ್ನಾನಮಾಡಿ ಪಾವನರಾದರು.ಬಳಿಕ ಭಕ್ತರ ಉಧ್ದಾರಕ್ಕಾಗಿ ಶ್ರೀಶೈಲ್ ಜದ್ಗುರುಗಳ ಸಾನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
Laxmi News 24×7