ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ₹62.1 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇಂದು ಯುವ ಮುಖಂಡ ಶ್ರೀ ರಾಹುಲ್ ಜಾರಕಿಹೊಳಿ ಅವರ ಜೊತೆಗೆ ಉದ್ಘಾಟನೆಗೊಳಿಸಲಾಯಿತು.
ಯಮಕನಮರಡಿ ಕ್ಷೇತ್ರದ ಪ್ರಗತಿ ಮತ್ತು ಅಭಿವೃದ್ದಿಗೆ ನಾನು ಮತ್ತು ಸಚಿವರು ಬದ್ಧರಾಗಿ, ಕ್ಷೇತ್ರದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸದಾ ಶ್ರಮಿಸುತ್ತಿದ್ದೇವೆ.
ಈ ವೇಳೆ ಆಯಾ ಗ್ರಾಮದ ಹಿರಿಯರು, ಮುಖಂಡರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮಗಾರಿಗಳ ವಿವರ (ಮೊತ್ತ ಲಕ್ಷ ರೂ.ಗಳಲ್ಲಿ)
1.ಗೋಟೂರ ಗ್ರಾಮದ ಪ್ರವಾಸಿ ಮಂದಿರದ ನೂತನ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮ
ವೆಚ್ಚ: 300.00 ಲಕ್ಷ ರೂ.
2.ಕುರಣಿಯಿಂದ ಕೋಚರಿ ಬ್ಯಾರೇಜ ವರೆಗೆ ರಸ್ತೆ ಸುಧಾರಣೆ
ವೆಚ್ಚ: 400.00 ಲಕ್ಷ ರೂ.
3.ಹಂಚಿನಾಳ-ಹಳೆ ಗುಡಗನಟ್ಟಿ ವರೆಗೆ ರಸ್ತೆ ಸುಧಾರಣೆ
ವೆಚ್ಚ: 600.00 ಲಕ್ಷ ರೂ.
4. ಯಮಕನಮರಡಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮ
ವೆಚ್ಚ: 400.00 ಲಕ್ಷ ರೂ.
5.ಹೂನ್ನೂರ- ಮಾಸ್ತಿಹೊಳಿ ಗ್ರಾಮದ ಪ್ರೌಢಶಾಲಾ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ
ವೆಚ್ಚ: 300.00 ಲಕ್ಷ ರೂ.
6.ಮಣಗುತ್ತಿ-ಅಲಧಾಳ ರಸ್ತೆ ಸುಧಾರಣೆ
ವೆಚ್ಚ: 3000.00 ಲಕ್ಷ ರೂ.
7.ದಡ್ಡಿಯಿಂದ -NH4 ವರೆಗೆ ರಸ್ತೆ ಸುಧಾರಣೆ
ವೆಚ್ಚ: 750 ಲಕ್ಷ ರೂ.
8.ಶೆಟ್ಟಿಹಳ್ಳಿ- ದಡ್ಡಿ ರಸ್ತೆ ಸುಧಾರಣೆ
ವೆಚ್ಚ: 460.00 ಲಕ್ಷ ರೂ.
Laxmi News 24×7