ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿರುವಾಗ; ಶ್ರೀರಾಮಸೇನೆ
ಡಿ.31 ರಂದು ಪಾಶ್ಚಾತ್ಯ ಹೊಸ ವರ್ಷ ಆಚರಿಸದಿರಿ; ಶ್ರೀರಾಮಸೇನೆ
ಮಾಜಿ ಪಿಎಂ ಮನಮೋಹನಸಿಂಗ್ ನಿಧನ ಹಿನ್ನೆಲೆ
ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿದೆ
ಹೋಟೆಲನಲ್ಲಿ ಕುಡಿತ-ಕುಣಿತಕ್ಕೆ ಅವಕಾಶ ನಿಡದಿರಿ
ಡಿಸೆಂಬರ್ 31 ಪಾಶ್ಚಾತ್ಯ ಹೊಸ ವರ್ಷ ಆಚರಿಸದಂತೆ ಬೆಳಗಾವಿಯ ಶ್ರೀರಾಮ ಸೇನೆ ಒತ್ತಾಯಿಸಿದೆ.
ಡಿಸೆಂಬರ್ 31ರ ರಾತ್ರಿ ವಿದೇಶಿ ಹೊಸ ವರ್ಷ ನಿಮಿತ್ಯ ಕುಡಿತ, ಕುಣಿತ, ನಶೆ, ಮಾದಕವಸ್ತುಗಳ ಸೇವನೆ,ಅಶ್ಲೀಲತೆ, ವ್ಯಭಿಚಾರ ಮುಂತಾದ ಅನೈತಿಕ ಚಟುವಟಿಕೆಗಳು ಪ್ರತಿ ವರ್ಷ ನಡೆಯುತ್ತಿವೆ. ಇದೊಂದು ಯುವಜನರನ್ನು ಸಮಾಜ ದಾರಿ ತಪ್ಪಲು ಪ್ರೇರಣೆಯಾಗಿದೆ. ಇದೊಂದು ಸಜ್ಜನ ಸಮಾಜಕ್ಕೆ ಕಂಟಕ ಮತ್ತು ಅವಮಾನವಾಗಿದೆ. ಈ ವರ್ಷ ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ ಹಿನ್ನೆಲೆಯಲ್ಲಿ ಸರ್ಕಾರ ಜನೆವರಿ 1 ನೇ ತಾರೀಖಿನ ವರೆಗೆ ಶೋಕಾಚರಣೆ ಘೋಷಿಸಿದ್ದು ಈ ಹಿನ್ನೆಲೆಯಲ್ಲಿ ತಮ್ಮ ಹೋಟೆಲ್ ನಲ್ಲಿ ಯಾವುದೇ ಮನೋರಂಜನೆ, ಕುಡಿತ, ಕುಣಿತಕ್ಕೆ ಪಾಶ್ಚಾತ್ಯ ಆಚರಣೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
ಬೆಳಗಾವಿ ಗ್ರಾಮೀಣ ಅಧ್ಯಕ್ಷ ಮಹೇಶ್ ಮುಚ್ಚಂಡಿಕರ್, ಜಿಲ್ಲಾ ಗೋ ರಕ್ಷಕ ಪ್ರಮುಖ ಸಿದ್ದರಾಯ ಬೂದನೂರ್, ಜಿಲ್ಲಾ ಗೋ ರಕ್ಷಕ ಪ್ರಮುಖ ವಿಠ್ಠಲ ಗಡ್ಡಿ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7