ಶ್ರೀ ಬಸವೇಶ್ವರ ಕೋ-ಆಪರೇಟ್ಹಿವ್ ಬ್ಯಾಂಕನ ನಿರ್ದೇಶಕರ ಚುನಾವಣೆ
ಶ್ರೀ ಬಸವೇಶ್ವರ ಕೋ-ಆಪರೇಟ್ಹಿವ್ ಬ್ಯಾಂಕನ ನಿರ್ದೇಶಕರ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿ ಪೂಜಾ ಅಶೋಕ ಹುಕ್ಕೇರಿಯವರು ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಶ್ರೀ ಬಸವೇಶ್ವರ ಕೋ-ಆಪರೇಟ್ಹಿವ್ ಬ್ಯಾಂಕನ ನಿರ್ದೇಶಕರ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿ ಪೂಜಾ ಅಶೋಕ ಹುಕ್ಕೇರಿಯವರು ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಶ್ರೀ ಬಸವೇಶ್ವರ ಕೋ-ಆಪರೇಟ್ಹಿವ್ ಬ್ಯಾಂಕನ ನಿರ್ದೇಶಕರಾಗಿ ತಂದೆಯವರಾದ ದಿವಂಗತ ಅಶೋಕ ಹುಕ್ಕೇರಿ ಅವರು ಅಪಾರ ಸೇವೆಯನ್ನು ಸಲ್ಲಿಸಿದ್ದು, ಅವರಂತೆಯೇ ತಾವು ಕೂಡ
ಸೇವಾಮನೋಭಾವವನ್ನು ಹೊಂದಿದ್ದೇವೆ. ತಮಗೆ ಬ್ಯಾಂಕಿನ ಸೆಕ್ಟರ್ ಕುರಿತು ಮಾಹಿತಿ ಇದ್ದು, ಯುವಪೀಳಿಗೆಗೆ ಅವಕಾಶ ಮಾಡಿಕೊಟ್ಟು ಹೊಸ ಬದಲಾವಣೆಗಳನ್ನು ತರಲು ಸಹಕರಿಸಬೇಕೆಂದು ವಿನಂತಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಪಾಪಣ್ಣ ಹಿಡದುಗ್ಗಿ, ಪಂಚಾಕ್ಷರಿ ಚೊಣ್ಣದ, ಗುರು ಜಗಳೇಶ್ವರ, ಚಿದಾನಂದ ರೋಗೆ, ಅನೀಲ ಹುಕ್ಕೇರಿ, ಚೇತನ ಗುಂಜಟಿ, ಸುರೇಂದ್ರ ಘಾಳಿ, ತೇಜಸ್ ಕಡಮನ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.