Breaking News

ಶಾಸಕ ಯತ್ನಾಳರ ಹೇಳಿಕೆ ಶರಣರಿಗೆ ಮಾಡಿದ ಅಪಮಾನ ತಕ್ಷಣ ಕ್ಷಮೆ ಕೇಳಲು ಸಚಿವ ಎಂ.ಬಿ.ಪಾಟೀಲ ಆಗ್ರಹ

Spread the love

ಶಾಸಕ ಯತ್ನಾಳರ ಹೇಳಿಕೆ ಶರಣರಿಗೆ ಮಾಡಿದ ಅಪಮಾನ ತಕ್ಷಣ ಕ್ಷಮೆ ಕೇಳಲು ಸಚಿವ ಎಂ.ಬಿ.ಪಾಟೀಲ ಆಗ್ರಹ

ವಿಶ್ವ ಗುರು ಬಸವಣ್ಣನವರ ಕುರಿತು ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಯತ್ನಾಳ ತಕ್ಷಣ ಕ್ಷಮೆ ಕೋರಬೇಕೆಂದು ಸಚಿವ ಎಂ.ಬಿ.ಪಾಟೀಲ ಆಗ್ರಹಿಸಿದ್ದಾರೆ. ತಮ್ಮ ಸೊಶಿಯಲ್ ಮಿಡಿಯಾದಲ್ಲಿ ಪೊಸ್ಟ್ ಹಾಕಿರುವ ಸಚಿವ ಎಂ.ಬಿ.ಪಾಟೀಲ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ ಅವರು ವಿಶ್ವಗುರು

ಬಸವಣ್ಣನವರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ. ಬಸವಣ್ಣ ನಮ್ಮ ಅಸ್ಮಿತೆ, ನಮ್ಮ ಪ್ರೇರಕ ಶಕ್ತಿ. ಸತ್ಯವು ಎಲ್ಲರಿಗೂ ತಿಳಿದಿರುವಾಗ ಅವರ ಸುಳ್ಳಿಗೆ ಕಿಮ್ಮತ್ತಿಲ್ಲ.

ಯತ್ನಾಳರ ಹೇಳಿಕೆ ಶರಣರಿಗೆ ಮಾಡಿದ ಅಪಮಾನ ತಕ್ಷಣ ಅವರು ಕ್ಷಮೆ ಕೋರಬೇಕೆಂದು ಒತ್ತಾಯಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಟ್ಯಾಗ್ ಮಾಡಿದ ಪೊಸ್ಟ್ ಮೂಲಕ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ