ನನ್ನ ಹಕ್ಕು ನನ್ನ ಆರೋಗ್ಯ ಎಂಬ ಘೋಷ ವಾಕ್ಯದಡಿ ಇಂದು ಬೆಳಗಾವಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ನಿಮಿತ್ತ ಜಾಗೃತಿ ರ್ಯಾಲಿಯನ್ನು ನಡೆಸಲಾಯಿತು.
ಇಂದು ವಿಶ್ವ ಏಡ್ಸ್ ದಿನದ ಹಿನ್ನೆಲೆ ಬೆಳಗಾವಿ ಜಿಲ್ಲಾಡಳಿತ, ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಾಗೃತಿ ರ್ಯಾಲಿಗೆ ಚಾಲನೆಯನ್ನು ನೀಡಲಾಯಿತು.
ಅಪರ ಜಿಲ್ಲಾಧಿಕಾರಿಗಳಾದ ವಿಜಯಕುಮಾರ್ ಹೊಣಕೇರಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾಕ್ಟರ್ ತುಕ್ಕಾರ್, ಡಾಕ್ಟರ್ ವಿಠ್ಠಲ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಿ ಎಚ್ ಓ ತುಕ್ಕಾರ್ ಅವರು 1987 ರಲ್ಲಿ ಬೆಳಗಾವಿಯಲ್ಲಿ ಮೊದಲ ಏಡ್ಸ್ ರೋಗಿ ಪಟ್ಟೆಯಾಗಿತ್ತು. ನಂತರದಲ್ಲಿ ನಡೆದ ಜಾಗೃತಿಯಿಂದಾಗಿ ಈಗ ಏಡ್ಸ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾದ ಇಳಿತವನ್ನು ಕಾಣಬಹುದು. ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಏಡ್ಸ್ ಪತ್ತೆಗಾಗಿ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಾರಕ ಏಡ್ಸ್ ತಡೆಗಟ್ಟುವುದು ಕೇವಲ ಅರೋಗ್ಯ ಇಲಾಖೆಯ ಕೆಲಸವಲ್ಲದೇ ಜನರು ಕೂಡ ಇದಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಆರಂಭಗೊಂಡ ರ್ಯಾಲಿಯೂ ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಬಿಮ್ಸ್ ಗೆ ತಲುಪಿ ಕೊನೆಗೊಂಡಿತು.
Laxmi News 24×7