Breaking News

ಕೆ.ಎಸ್.ಆರ್.ಪಿ ಹಾಗೂ ಪಿಟಿಎಸ್ ಕಂಗ್ರಾಳಿ ಘಟಕದ ವಾರ್ಷಿಕ ಅಂತರ್ ದಳಗಳ ಕ್ರೀಡಾಕೂಟದ ಸಮಾರೋಪ

Spread the love

ಬೆಳಗಾವಿಯ 2ನೇ ಪಡೆ ಕೆ.ಎಸ್.ಆರ್.ಪಿ ಹಾಗೂ ಪಿಟಿಎಸ್ ಕಂಗ್ರಾಳಿ ಘಟಕದ ವಾರ್ಷಿಕ ಅಂತರ್ ದಳಗಳ ಕ್ರೀಡಾಕೂಟದ ಸಮಾರೋಪ ಸಮಾರಂಭ ಉತ್ಸಾಹದಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ಪೊಲೀಸ್ ವರಿಷ್ಠ ಅಧಿಕಾರಿ ಡಾ. ಭೀಮಾಶಂಕರ ಗುಳೇದ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅವರು ಶುಭ ಕೋರಿದರು.

ಅತಿಥಿಗಳ ಭಾಷಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮೀಸಲು ಪೊಲೀಸ್ ಪಡೆಯ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಮಾಂಡೆಂಟ್ ರಮೇಶ್ ಬೊರಗಾವೆ ರವರು ಅಧ್ಯಕ್ಷತೆ ವಹಿಸಿದ್ದರು. ಪಿಟಿಎಸ್ ಕಂಗ್ರಾಳಿಯ ಪ್ರಾಂಶುಪಾಲರಾದ ಕೆ. ಎಂ. ಮಹಾದೇವಪ್ರಸಾದ್ ಉಪಸ್ಥಿತರಿದ್ದರು. ಎ ಸಿ
ಚನ್ನಬಸವ , ನಾಗೇಶ ಯಡಾಳ, ಆಶಿಷ್ ಮೇಘನ್ನವರ್ ಹಾಗೂ 2 ನೇಯ ಪಡೆ ಮತ್ತು ಪಿಟಿಎಸ್ ಕಂಗ್ರಾಳಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಿದ್ದರು.


Spread the love

About Laxminews 24x7

Check Also

ಬಂಡೀಪುರ ಸಫಾರಿ ಪುನಾರಂಭಕ್ಕೆ ರೈತ ಸಂಘದ ವಿರೋಧ: ಗುಂಡ್ಲುಪೇಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Spread the love​ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಪುನಾರಂಭಿಸಲು ಉದ್ದೇಶಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ