ಬಾಂಗ್ಲಾ ಸರ್ಕಾರದಿಂದ ಶ್ರೀ ಚಿನ್ಮಯ್ ಕೃಷ್ಣದಾಸ್ ಪ್ರಭುಗಳ ಬಂಧನ
ಹಿಂದುಗಳ ರಕ್ಷಣೆಗೆ ಮೋದಿ ಸರ್ಕಾರ ಮುಂದಾಗಲಿ ; ದೇಶ ವ್ಯಾಪಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ
ಬಾಂಗ್ಲಾ ಸರ್ಕಾರದಿಂದ ಶ್ರೀ ಚಿನ್ಮಯ್ ಕೃಷ್ಣದಾಸ್ ಪ್ರಭುಗಳ ಬಂಧನ
ಮುನಿಗಳ ಉಪಸ್ಥಿತಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ
ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಕ್ಷೇಪ ವಹಿಸಲಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಯಾಗಲಿ
ಬಾಂಗ್ಲಾ ಸರ್ಕಾರದಿಂದ ಶ್ರೀ ಚಿನ್ಮಯ್ ಕೃಷ್ಣದಾಸ್ ಪ್ರಭುಗಳ ಬಂಧನವನ್ನು ಖಂಡಿಸಿ ಇಂದು ದೇಶಾದ್ಯಂತ ಮುನಿಗಳ ಉಪಸ್ಥಿತಿಯಲ್ಲಿ ದೇಶಾದ್ಯಂತ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸುತ್ತಿದೆ. ಬೆಳಗಾವಿಯಲ್ಲಿಯೂ ಬಾಂಗ್ಲಾ ಸರ್ಕಾರದ ವಿರುದ್ಧ ವಿಶ್ವಹಿಂದು ಪರಿಷತ್ ಪ್ರತಿಭಟನೆ ನಡೆಸಿತು .
ಶನಿವಾರದಂದು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಮುನಿಗಳ ಉಪಸ್ಥಿತಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿತು.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನ ಒಂದುಗೂಡಿಸುತ್ತಿದ್ದ ಶ್ರೀ ಚಿನ್ಮಯ್ ಕೃಷ್ಣದಾಸ್ ಪ್ರಭುಗಳ ವಿನಾಕಾರಣ ಬಂಧಿಸಿ ಕಾರಾಗೃಹದಲ್ಲಿ ಇಡಲಾಗಿದೆ. ಹಿಂದುಗಳು ಬೇರೆ ದೇಶದಲ್ಲಿ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಒಂದಾಗಬೇಕೆಂದು ಮಹಿಳಾ ಪ್ರತಿಭಟನಾಕಾರರು ಒತ್ತಾಯಿಸಿದರು. Byte
ಮತ್ತೋರ್ವ ಪ್ರತಿಭಟನೆಕಾರರು ಮಾತನಾಡಿ ಬಾಂಗ್ಲಾದ ಪ್ರಧಾನಿ ಮೊಹಮ್ಮದ್ ಯೂನಿಸ್ ಅವರು ಇಸ್ಕಾನ್
ಶ್ರೀ ಚಿನ್ಮಯ್ ಕೃಷ್ಣದಾಸ್ ಪ್ರಭುಗಳ ಅವರು ಹಿಂದುಗಳು ಒಂದುಗೂಡುವುದನ್ನು ಸಹಿಸದೆ ಅವರ ವಿರುದ್ಧ ಕೆ ಎಸ್ ದಾಖಲಿಸಿ ಜೈಲಿಗಟ್ಟಿದ್ದಾರೆ. ಎಲ್ಲ ಸ್ವಾಮೀಜಿಗಳು ರಸ್ತೆಗಳಿದರೇ ನಿಮ್ಮ ಗತಿ ಏನಾಗಿತು ಎಂಬುದನ್ನ ಯೋಚಿಸಿ. ಪ್ರಧಾನ ಮಂತ್ರಿ ಮೋದಿ ಅವರು ಹಸ್ತಕ್ಷೇಪ ಮಾಡಿ ಅವರನ್ನು ಬಿಡುಗಡೆ ಗೊಳಿಸಬೇಕೆಂದು ಒತ್ತಾಯಿಸಿದರು. ಬೈಟ್
ಬಾಂಗ್ಲಾದೇಶದ ಶ್ರೀ ಚಿನ್ಮಯ್ ಕೃಷ್ಣದಾಸ್ ಪ್ರಭುಗಳನ್ನು ಅಲ್ಲಿನ ಪ್ರಧಾನಿಗಳು ಬಂಧಿಸಿದ್ದು ಖಂಡನೀಯ. ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಬೇಕು. ಹಿಂದುಗಳ ಮತದಿಂದ ಆರಿಸಿ ಬಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಿಂದುಗಳ ಕಗ್ಗಲಿಯನ್ನು ತಪ್ಪಿಸಬೇಕು. ಯುಕ್ರೆನನಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗುವ ಪ್ರಧಾನಿ ಮೋದಿ ಬಾಂಗ್ಲಾದೇಶದಲ್ಲಿಯೂ ಹಿಂದುಗಳ ರಕ್ಷಣೆಗೆ ಮುಂದಾಗಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ಕೃಷ್ಣ ಭಟ್ ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಹಾಗೂ ಸ್ವಾಮೀಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
#