Breaking News

ಭಾವೈಕ್ಯ ಸಾರಿದ ಹಿಂದೂ-ಮುಸ್ಲಿಂ ಯುವಕರು

Spread the love

ಕಾಗವಾಡ: ತಾಲ್ಲೂಕಿನ ಉಗಾರ ಬುದ್ರುಕ ಗ್ರಾಮದ ವಾರ್ಡ್ ನಂ.7ರಲ್ಲಿ ಪದ್ಮಶ್ರೀ ಕಾಲೊನಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾದ ಪಕ್ಕದಲ್ಲಿ ಹಿಂದೂ- ಮುಸ್ಲಿಂ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯ, ಸಾಮರಸ್ಯದ ಸಂದೇ ಸಾರಿದ್ದಾರೆ.

ಇಲ್ಲಿನ ಸುಮಾರು 30ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹಾಗೂ 20ಕ್ಕೂ ಹೆಚ್ಚು ಹಿಂದೂ ಯುವಕರು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿದರು.

ಕಾಗವಾಡ | ಭಾವೈಕ್ಯ ಸಾರಿದ ಹಿಂದೂ-ಮುಸ್ಲಿಂ ಯುವಕರು

ಕಳೆದ 6 ವರ್ಷಗಳಿಂದ ಈ ರೀತಿಯ ಗಣೇಶೋತ್ಸವ ಆಚರಿಸುತ್ತಿದ್ದು ತಮ್ಮ ಗಣೇಶ ಮಂಡಳಿಗೆ ಹಿಂದೂ-ಮುಸ್ಲಿಂ ಮಂಡಳಿ ಎಂದು ಹೆಸರು ಇಟ್ಟಿದ್ದಾರೆ. ಮಂಡಳಿಯಲ್ಲಿ ಎರಡು ಸಮಾಜದ ಸದಸ್ಯರಿದ್ದಾರೆ. ಅದರಂತೆ ಗಲ್ಲಿಯ ಹಿಂದೂ ಹಾಗೂ ಮುಸ್ಲಿಂ ಯುವಕರು ದರ್ಗಾ ಪಕ್ಕದಲ್ಲಿ ಪ್ರತಿ ವರ್ಷ ಮಂಟಪ ನಿರ್ಮಾಣ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.

ಹಿಂದೂ-ಮುಸ್ಲಿಂ ಗಣೇಶೋತ್ಸವ ಮಂಡಳಿ ಸದಸ್ಯರಾದ ಮಾರುತಿ ಕೋಳಿ, ಅಪ್ಪಾಸಾಬ ನದಾಫ, ಉಮೇಶ ಕೋಳಿ, ಅಸ್ಲಂ ಮಾಂಜರೆ, ಸುಶಾಂತ ವಿರೋಜೆ, ಸುಭಾನ ಢಲಾಯತ್, ರಾಕೇಶ ಕೋಳಿ, ಜಾವೇದ ಮಾಂಜರೆ ಸೇರಿದಂತೆ ಹಲವು ಹಿಂದೂ- ಮುಸ್ಲಿಂ ಯುವಕರು ಭಾವೈಕ್ಯದಿಂದ ಗಣೇಶೋತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ.


Spread the love

About Laxminews 24x7

Check Also

ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ನೀಡಿದೆ.

Spread the loveಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ