Breaking News

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ 200 ವರ್ಷವಾಯ್ತು,

Spread the love

ಕಿತ್ತೂರು ಸ್ವತಂತ್ರ ಸಂಸ್ಥಾನವಾಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಯುದ್ಧ ಸಿದ್ಧತೆಗಳನ್ನು ಪೂರೈಸಿಕೊಳ್ಳುವವರೆಗೆ ಸಂಧಾನದ ಮಾತು ಆಡುತ್ತಿದ್ದ ಬ್ರಿಟಿಷರು ತಮ್ಮ ಯುದ್ಧ ಖೈದಿಗಳು ಬಿಡುಗಡೆ ಆಗುತ್ತಲೇ ಆಧುನಿಕ ಯುದ್ಧ ಸಾಮಗ್ರಿಗಳೊಂದಿಗೆ ಯುದ್ಧ ಆರಂಭಿಸಿಯೇ ಬಿಟ್ಟರು. ಬ್ರಿಟಿಷರಿಗೆ ಕಿತ್ತೂರು ಕೋಟೆಯಲ್ಲಿದ್ದ ವಿದ್ರೋಹಿಗಳು ಕೈಜೋಡಿಸಿದರು. ಕೋಟೆಯಲ್ಲಿದ್ದ ಮದ್ದಿನ ಮನೆಯಲ್ಲಿ ಮೋಸ ಮಾಡಿಬಿಟ್ಟರು. ಬ್ರಿಟಿಷರ ಫಿರಂಗಿಗಳು ಕಿತ್ತೂರಿನ ಕೋಟೆಯ ಭಾಗಗಳನ್ನು ಕೆಡವಿದವು. ಕಿತ್ತೂರು ಕಾಪಾಡಲು, ದೇಶವಾಸಿಗಳ ರಕ್ಷಣೆಗೆ ಚೆನ್ನಮ್ಮ ಯತ್ನಿಸುತ್ತಿದ್ದರೆ ಕಿತ್ತೂರು ಸೈನಿಕರು ಕೆಚ್ಚೆದೆಯಿಂದ ಹೋರಾಟ ಮುಂದುವರಿಸಿದರು.

 

 

ಭಾರತವನ್ನು ವಶಪಡಿಸಿಕೊಂಡು ತನ್ನ ಪ್ರಭುತ್ವವನ್ನು ನೆಲೆಗೊಳಿಸಲು ಯತ್ನಿಸುತ್ತಿದ್ದ ಬ್ರಿಟಿಷರಿಗೆ (British East India Company) ಪರಿಣಾಮಕಾರಿ ಪ್ರತಿರೋಧ ಒಡ್ಡಿದ ಕನ್ನಡನಾಡಿನ ವೀರರಾಣಿ ಕಿತ್ತೂರು ಚೆನ್ನಮ್ಮ ( Kittur Rani Chennamma). ಪುಟ್ಟ ಸಂಸ್ಥಾನವಾದರೂ ಸಮೃದ್ಧವಾಗಿದ್ದ ಕಿತ್ತೂರು ಸಂಸ್ಥಾನದ (princely state) ಪ್ರಸಿದ್ಧ ದೇಸಾಯಿ ಮಲ್ಲಸರ್ಜನ ಕಿರಿಯ ಮಡದಿ ಚೆನ್ನಮ್ಮ. ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತದರ ಆಸುಪಾಸಿನ ಪ್ರದೇಶಗಳನ್ನು 1858 ರಿಂದ 1824 ರವರೆಗೆ ಆಳಿದವರೇ ಕಿತ್ತೂರಿನ ದೇಸಾಯಿಗಳು. ವಿಖ್ಯಾತ ವಿಜಯನಗರ ಸಾಮ್ರಾಜ್ಯದ ಪತನಾನಂತರ ಹುಟ್ಟಿಕೊಂಡ ಹಲವಾರು ಸಣ್ಣಪುಟ್ಟ ಮನೆತನಗಳಲ್ಲಿ ಕಿತ್ತೂರಿನ ದೇಸಾಯಿಗಳ ಮನೆತನವೂ ಒಂದು.

ದೇಸಾಯಿಗಳ ಮನೆತನದ ಮಲ್ಲಸರ್ಜನ ಪಟ್ಟಕ್ಕೆ ಬಂದಿದ್ದು 1782 ರಲ್ಲಿ. 700 ಹಳ್ಳಿಗಳನ್ನು ಒಳಗೊಂಡಿದ್ದು ಕಲಘಟಗಿ, ಮುನವಳ್ಳಿ, ನರಗುಂದ, ಧಾರವಾಡದವರೆಗೂ ವಿಸ್ತರಿಸಿದ್ದ ಕಿತ್ತೂರು ರಾಜ್ಯದ ಮೇಲೆ ಮಲ್ಲಸರ್ಜನ ಕಾಲದಲ್ಲಿ ಹೈದರಾಲಿ ಖಾನ್, ಟೀಪು ಸುಲ್ತಾನ್ ಮತ್ತು ಮರಾಠರು ದಾಳಿ ಮಾಡಿದ್ದರು. ಮರಾಠರು ದೇಸಾಯಿಯನ್ನು ಸೆರೆಹಿಡಿದಿದ್ದರು. ಆ ಸಂದರ್ಭದಲ್ಲಿ ರಾಣಿ ಚೆನ್ನಮ್ಮನೇ ರಾಜ್ಯದ ಆಡಳಿತ ಸೂತ್ರಗಳನ್ನು ಹಿಡಿದಿದ್ದರು. ಪೇಶ್ವೆಗಳ ಬಂಧನದಲ್ಲಿದ್ದ ಮಲ್ಲಸರ್ಜ ತನ್ನ ಕೊನೆಗಾಲದಲ್ಲಿ ಬಿಡುಗಡೆ ಹೊಂದಿ ಕಿತ್ತೂರಿಗೆ ಹಿಂತಿರುಗಿದರೂ ಬಹುಬೇಗ ತೀರಿಕೊಂಡ.

ಮಲ್ಲಸರ್ಜನ ಮಗ ಶಿವಲಿಂಗ ರುದ್ರ ಸರ್ಜ ಪಟ್ಟಕ್ಕೆ ಬಂದರೂ ಎಂಟು ವರ್ಷಗಳಲ್ಲಿಯೇ ಅನಾರೋಗ್ಯಪೀಡಿತನಾಗಿ ಮರಣಿಸಿದ. ಈ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಇವರು ಮಾಸ್ತ ಮರಡಿ ಗೌಡರ ಮಗ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡು ಮಲ್ಲಸರ್ಜನನು ತೀರಿಕೊಂಡ ಬಳಿಕ ಚೆನ್ನಮ್ಮನೆ ದತ್ತಕನ ಹೆಸರಿನಿಂದ ರಾಜ್ಯಭಾರ ಮಾಡುತ್ತಿದ್ದಳು.

ತಮಗೆ ಶಿವಲಿಂಗ ರುದ್ರ ಸರ್ಜ ಸಹಾಯ ಮಾಡಿದ್ದರಿಂದ ಆತನಿಗೆ ವಂಶಪಾರಂಪರ್ಯವಾಗಿ ಕಿತ್ತೂರು ಆಳಲು ಸನ್ನದು ನೀಡಿದ್ದರು. ಇಡೀ ದೇಶವನ್ನು ತಮ್ಮ ಆಡಳಿತಕ್ಕೆ ತಂದುಕೊಳ್ಳಬೇಕೆಂಬ ಬ್ರಿಟಿಷರ ಕಾರ್ಯತಂತ್ರದ ಭಾಗವಾಗಿ ದತ್ತು ಸ್ವೀಕಾರವನ್ನು ರದ್ದು ಮಾಡಿ ಕಾನೂನು ತಂದಿದ್ದರು. ಇದೇ ನೆಪದಿಂದ ಕಿತ್ತೂರು ಕಬಳಿಸಲು ಬ್ರಿಟಿಷರು ಮುಂದಡಿಯಿಟ್ಟರು.

ಧಾರವಾಡದಲ್ಲಿ ಕಲೆಕ್ಟರ್​ ಆಗಿದ್ದ ಥ್ಯಾಕರೆ ಹಾಗೂ ದಖನ್​ನ ಕಮಿಷನರ್​​ ಆಗಿದ್ದ ಚಾಪ್ಲೀನ್ ಇಬ್ಬರೂ ಸೇರಿ ಕಿತ್ತೂರು ಆಡಳಿತವನ್ನು ತಮ್ಮ ಕಾರುಬಾರುಗಳಿಗೆ ಒಪ್ಪಿಸುವಂತೆ ಚೆನ್ನಮ್ಮನಿಗೆ ಮಾಹಿತಿ ಕಳುಹಿಸಿದರು. ಚೆನ್ನಮ್ಮ ತಮ್ಮ ದತ್ತಕವನ್ನು ಸಮರ್ಥಿಸಿಕೊಂಡು ಅದಕ್ಕೆ ಅಗತ್ಯವಾದ ಸಾಕ್ಷ್ಯಗಳನ್ನು ಒದಗಿಸಿದ್ದೇ ಅಲ್ಲದೆ ಸಮಾಧಾನವಾಗಿ ಬ್ರಿಟಿಷ್​ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮುಂದಾದರು.

ಬ್ರಿಟಿಷರು ಮೊಂಡಾಟ ಬಿಡಲಿಲ್ಲವಾದ್ದರಿಂದ ಸ್ವಾಭಿಮಾನಿಯಾದ ಚೆನ್ನಮ್ಮ ಕಿತ್ತೂರು ಸಂಸ್ಥಾನದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಂಡಳು. ವಕೀಲರನ್ನು ಸರ್ಕಾರದ ಬಳಿ ಕಳುಹಿಸಿದಳು. ಕಿತ್ತೂರು ಖಜಾನೆಗೆ ಬೀಗಮುದ್ರೆ ಹಾಕಲು ಯತ್ನಿಸಿದ್ದನ್ನು ಪ್ರತಿಭಟಿಸಿ ಅನಾವಶ್ಯಕವಾಗಿ ಕಿತ್ತೂರು ಆಡಳಿತದಲ್ಲಿ ಮೂಗುತೂರಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಳು.


Spread the love

About Laxminews 24x7

Check Also

ನರೇಗಾ ಯೋಜನೆಯಡಿ ಕೆಲಸ ಮಾಡಲು ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.:zp ceo

Spread the loveಮೈಸೂರು : ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಲು ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಆದರೂ, ಕೂಲಿ ಕಾರ್ಮಿಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ