Breaking News

: ಹಾಳಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು,

Spread the love

ಹುಬ್ಬಳ್ಳಿ: ಹಾಳಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು, ಜೆಜೆಎಂ ಯೋಜನೆಯಲ್ಲಿ 24X7 ನೀರಿನ ಪೈಪ್‌ ಅಳವಡಿಸಿದ್ದರೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಿಲ್ಲ.

– ಇಂತಹ ಸಮಸ್ಯೆಗಳ ನಡುವೆಯೇ ಪಾಲಿಕೆ ವ್ಯಾಪ್ತಿಯ ಉಣಕಲ್‌ ಗ್ರಾಮದ ಜನರು ಬದುಕು ಕಟ್ಟಿಕೊಳ್ಳುತ್ತಿದ್ಧಾರೆ.

ಉಣಕಲ್‌: ಸೌಲಭ್ಯ ಕೊರತೆ, ರೋಗ ಭೀತಿ

ಒಂದೆಡೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹುಬ್ಬಳ್ಳಿ ನಗರ, ಇದಕ್ಕೆ ಹೊಂದಿಕೊಂಡೇ ಕೇವಲ 100 ಮೀಟರ್‌ ದೂರದಲ್ಲಿ ಉಣಕಲ್‌ ಗ್ರಾಮವಿದೆ.

ಉಣಕಲ್‌ ಗ್ರಾಮವು 20 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಒಳಗೊಂಡಿದೆ. ಇಲ್ಲಿನ ಕಲ್ಮೇಶ್ವರ ನಗರ, ಹಳೆಯ ಕಲ್ಮೇಶ್ವರ ಓಣಿ, ಕುರುಬರ ಓಣಿ, ಚಲವಾದಿ ಓಣಿ, ಅಚ್ಚವ್ವನ ಕಾಲೊನಿ, ಅಂಬಿಕಾ ನಗರ, ರವೀಂದ್ರ ನಗರ, ಏಕತಾ ನಗರ, ತಾಜ್‌ ನಗರ, ಕೆರೆ ಓಣಿ, ಕೊರವಿ ಓಣಿ, ಗುಡಿ ಓಣಿ, ಹರಿಜನ ಕೆರೆ, ಮ್ಯಾಗೇರಿ, ಕುರುಬಗೇರಿ ಸೇರಿದಂತೆ 15ಕ್ಕೂ ಅಧಿಕ ಪ್ರದೇಶಗಳು ಗ್ರಾಮದ ವ್ಯಾಪ್ತಿಗೆ ಒಳಪಡುತ್ತವೆ. ಆದರೆ, ಅಭಿವೃದ್ಧಿ ಮಾತ್ರ ಕೆಲ ಪ್ರದೇಶಗಳಿಗೆ ಸೀಮಿತವಾಗಿದೆ.


Spread the love

About Laxminews 24x7

Check Also

ಡಿಕೆಶಿ ಪಕ್ಷದ ಅಧ್ಯಕ್ಷರು. ರಾಜಣ್ಣ ಪಕ್ಷದ ಶಾಸಕರು. ಅವರಿಬ್ಬರು ಭೇಟಿ ಆಗಿರುವುದರಲ್ಲಿ ತಪ್ಪೇನಿದೆ ಎಂದ ಶಾಸಕ ಲಕ್ಷ್ಮಣ್​​

Spread the loveಚಿಕ್ಕೋಡಿ: “ಡಿಸಿಎಂ ಡಿ.ಕೆ.ಶಿವಕುಮಾರ್​​​ ಮತ್ತು ಮಾಜಿ ಸಚಿವ ಕೆ.ಎನ್​​.ರಾಜಣ್ಣ ಭೇಟಿ ಆಗಿರುವುದಲ್ಲಿ ತಪ್ಪೇನು? ಅವರು ಪಕ್ಷದ ಅಧ್ಯಕ್ಷರು, ಇವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ