ಮುಂಬಯಿ: ಮಹಾರಾಷ್ಟ್ರದ ಖಡಕ್ವಾಸ್ಲಾ ಅಣೆ ಕಟ್ಟನ್ನು ತೆರೆದಿರುವ ಕಾರಣ ಪುಣೆಯ ಹಲವು ನಗರ ಗಳು ಜಲಾವೃತಗೊಂಡಿವೆ. ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದೆ. ಮಳೆ ಹೆಚ್ಚಿರುವ ಕಾರಣ ಪರಿಸ್ಥಿತಿ ಕೈಮೀರುತ್ತಿದೆ ಈ ಹಿನ್ನೆಲೆಯಲ್ಲಿ ಪುಣೆಯ ಏಕ್ತಾ ನಗರ ಸೇರಿ ಹಲವೆಡೆ ರಕ್ಷಣ ಕಾರ್ಯಾಚರಣೆಗಾಗಿ ಸೇನಾ ಸಿಬಂದಿಯನ್ನು ನಿಯೋಜಿಸಲಾಗಿದೆ.
ಏಕ್ತಾ ನಗರದ ಹಲವು ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಣೆಕಟ್ಟಿನಿಂದ ರವಿವಾರ 35,000 ಕ್ಯುಸೆಕ್ ನೀರು ಬಿಡುಗಡೆ ಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಏಕ್ತ ನಗರದ ಸಿನ್ಹಾಗಢ ರಸ್ತೆಯಲ್ಲಿರುವ ದ್ವಾರಕ ಸೊಸೈಟಿಯಲ್ಲಿ ಸೇನಾ ಸಿಬಂದಿಯನ್ನು ನಿಯೋಜಿಸ ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.