ಮಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ “ಯುವನಿಧಿ’ ಆರಂಭದಲ್ಲೇ ಹಿನ್ನಡೆ ಕಾಣುತ್ತಿದ್ದು, ನೋಂದಾಯಿತ “ಲಕ್ಷ’ ಫಲಾನುಭವಿಗಳ ಪೈಕಿ ಹಣ ದೊರೆಯುತ್ತಿರುವುದು ಕೆಲವು “ಸಾವಿರ’ ಮಂದಿಗೆ ಮಾತ್ರ!
ಯೋಜನೆಯ ಫಲಾನುಭವಿಗಳು “ತಾನು ನಿರುದ್ಯೋಗಿ, ವ್ಯಾಸಂಗ ಮುಂದುವರಿಸುತ್ತಿಲ್ಲ ಹಾಗೂ ಸ್ವಉದ್ಯೋಗಿಯಾಗಿಲ್ಲ’ ಎಂದು ಪ್ರತಿ ತಿಂಗಳ 25ನೇ ತಾರೀಕಿನೊಳಗೆ ಕಡ್ಡಾಯವಾಗಿ ಸ್ವಯಂ ಘೋಷಣೆ ಪ್ರಮಾಣಪತ್ರವನ್ನು ಜಿಲ್ಲಾ ಉದ್ಯೋಗಾಧಿಕಾರಿಗೆ ನೀಡಬೇಕು ಎಂದು ಇತ್ತೀಚೆಗೆ ರಾಜ್ಯ ಸರಕಾರ ಹೊಸ ಆದೇಶ ನೀಡಿತ್ತು.
ಆದರೆ ಸಾಕಷ್ಟು ಮಂದಿ ಫಲಾನುಭವಿಗಳು ಮರೆತು ಹೋಗಿ ಸ್ವಯಂ ಘೋಷಣೆ ಮಾಡುವುದಿಲ್ಲ ಅಥವಾ ಕೆಲವರು ವಿಳಂಬವಾಗಿ ಮಾಡುವುದರಿಂದ ಖಾತೆಗೆ ಹಣ ಜಮೆ ಆಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.