Breaking News

ಹಾಡು ಮುಗಿಸಿದ ಹುಲ್ಯಾಳ ಮಹಾದೇವಪ್ಪ

Spread the love

ಮೂಡಲಗಿ: ‘ಹಾರ್ಮೋನಿಯಂ ಮುಂದೆ ಕುಳಿತು ಹಾಡಲು ಶುರು ಮಾಡಿದರೆ ಮುಂದೆ ಕುಳಿತ ಶ್ರೋತೃಗಳೆಲ್ಲ ತಲೆದೂಗುತ್ತ ಜಗತ್ತನ್ನೇ ಮರೆಯುತ್ತಿದ್ದರು. ಅಂಥ ಅದ್ಭುತ ಭಜನಾ ಗಾಯನವನ್ನು ಶೃತಿಬದ್ಧವಾಗಿ ಮಾಡುತ್ತಿದ್ದ ತಾಲ್ಲೂಕಿನ ನಾಗನೂರ ಗ್ರಾಮದ ಹುಲ್ಯಾಳ ಮಹಾದೇವಪ್ಪ ಎಂದೇ ಗುರುತಿಸಿಕೊಂಡಿದ್ದ ಮಹಾದೇವಪ್ಪ ವೀರಭದ್ರಪ್ಪ ಚಿಮ್ಮಡ ಅವರು ಇತ್ತೀಚೆಗೆ ನಿಧನರಾದರು.

ಅವರ ಅಭಿಮಾನಿಗಳು ಸ್ವರಶ್ರದ್ಧಾಂಜಲಿ ಸ್ಮರಣೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮದ ಶಿವಲಿಂಗಪ್ಪ ಚಪ್ಪರ ತೋಟದಲ್ಲಿ ಏರ್ಪಡಿಸಿದ್ದಾರೆ.

ಉತ್ತರ ಕರ್ನಾಟದಕ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಯಾವುದೇ ಊರುಗಳಲ್ಲಿ ಜರುಗುವ ಭಜನಾ ಹಾಡಲಿಕ್ಕೆ ಹುಲ್ಯಾಳ ಮಹಾದೇವಪ್ಪ ಬರತ್ತಾರೆ ಅಂದರೆ ಅವರ ಹಾಡನ್ನು ಕೇಳಲಿಕ್ಕೆ ಸಹಸ್ರ ಸಂಖ್ಯೆಯಲ್ಲಿ ಸಂಗೀತ ಪ್ರಿಯರು ಜಮಾಯಿಸಿ, ಮಹಾದೇವಪ್ಪ ಅವರು ಅಲಾಪಿಸುವ ಹಾಡುಗಳನ್ನು ಧ್ಯಾನಾಸಕ್ತರಾಗಿ ಕೇಳುತ್ತಿದ್ದರು. ಭಜನೆ ಗಾಯನ, ಗಾಯನ ತಾಲೀಮು, ತರಬೇತಿಗಾಗಿ ತಮ್ಮ ಆಯುಷ್ಯವನ್ನು ತಿರುಗಾಟದಲ್ಲಿ ಸವೆಸಿದವರು.

7ನೇ ತರಗತಿಯವರೆಗೆ ಕಲಿತಿರುವ ಮಹಾದೇವಪ್ಪ ಅವರು ತಮ್ಮ 14ನೇ ವಯಸ್ಸಿನಲ್ಲಿ ಮುಖಕ್ಕೆ ಬಣ್ಣ ಹಚ್ಚಿಕೊಂಡು ಪಾರಿಜಾತ ಬಯಲಾಟದಲ್ಲಿ ಸತ್ಯಭಾಮೆ ಪಾತ್ರವನ್ನು ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದರು. 1969ರಲ್ಲಿ ಧಾರವಾಡದ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂ. ಅರ್ಜುನಸಾ ನಾಕೋಡ್‌ ಅವರ ಬಳಿಯಲ್ಲಿ ಸುಗಮ ಸಂಗೀತದಲ್ಲಿ ಪರಿಣಿತಿ ಪಡೆದುಕೊಂಡರು. ಮಹಾದೇವಪ್ಪ ಅವರು ಬೆಳೆದು ಸಾವಿರಾರು ಭಜನಾ ಗಾಯನ ಪ್ರೀಯರಿಗೆ ಮಾರ್ಗದರ್ಶನ ನೀಡಿದ್ದಾರೆ. ಸಾವಿರಾರು ಭಜನಾ ಕಾರ್ಯಕ್ರಮದಲ್ಲಿ ಹಾಡಿ ಶ್ರೋತೃಗಳ ಮನ ತಣಿಸಿದ್ದಾರೆ.

ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮ ನೇಕಾರಿಕೆ ಮಾಡಿಕೊಂಡಿದ್ದ ವೀರಭದ್ರ ಹಾಗೂ ಬಂಗಾರೆವ್ವ ಮಗನಾಗಿ ಜನಿಸಿದ ಮಹಾದೇವಪ್ಪ ಕಡು ಬಡತನದಲ್ಲಿ ಬೆಳೆದಿದ್ದರೂ ಸಹ ಗಾಯನವೇ ಅವರ ಶ್ರೀಮಂತಿಕೆಯಾಗಿತ್ತು. ಮಹಾದೇವಪ್ಪ ಅವರು ಕಲಾ ಸೇವೆಗೆ ಕರ್ನಾಟಕ ಸರ್ಕಾರದಿಂದ ‘ಗಮಕ ಕಲಾಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದು, ಅನೇಕ ಮಠಮಾನ್ಯಗಳಿಂದ ಪ್ರಶಸ್ತಿ, ಗೌರವಗಳನ್ನು ಪಡೆದುಕೊಂಡಿದ್ದಾರೆ. ಗೋಠೆಯಲ್ಲಿ ಜರುಗುವ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಅನೇಕ ಭಜನಾ ಕಲಾವಿದರಿಂದ ಸ್ವರ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ