ಬೆಂಗಳೂರು, ಜುಲೈ, 09: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಪಾಲಾದಾಗಿನಿಂದ ಬಾ.. ಶೆಡ್ಗೆ ಹೋಗುವ.. ಕೊಂಟೆಬಿಲ್ಲೆ ಆಡುವ ಬಾ ಎನ್ನುವ ರೀಲ್ಸ್ ವಿಡಿಯೋಗಳು ಸಾಮಾಜಿಕ ಜಲಾತಾಣಗಳಲ್ಲಿ ಫುಲ್ ಟ್ರೆಂಡ್ ಆಗಿಬಿಟ್ಟಿವೆ. ಇದೋಗ ಅದೇ ಶೈಲಿಯಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.
ಚಿಕ್ಕವರಿಂದ ಹಿಡಿದು ಹಿರಿಯರು ಕೂಡ ವಿವಿಧ ಆಯಾಮಗಳಲ್ಲಿ ಈ ರೀಲ್ಸ್ ಮಾಡುತ್ತಿದ್ದಾರೆ. ಅದು ಪವಿತ್ರಾ ಗೌಡ ತಮ್ಮ ಮಾಧ್ಯಮದವರಿಗೆ ಕೆಣಕಿದಾಗಿನಿಂದ ಈ ರೀಲ್ಸ್ಗಳು ಹುಟ್ಟಿಕೊಂಡವು. ಸುಮ್ಮನೆ ಇರಲಾರ್ದೆ ಇರುವೆ ಬಿಟ್ಟುಕೊಂಡ ಅನ್ನುವ ಪರಿಸ್ಥಿತಿ ಇದೀಗ ಪವಿತ್ರಾ ಗೌಡ ತಮ್ಮನದ್ದಾಗಿದೆ.
ಮಾಧ್ಯಮದವರಿಗೆ ನಮ್ಗೇನು ಮಾಡೋದಿಕ್ಕೆ ಏನು ಕೆಲ್ಸ ಇಲ್ವಾ ಎಂದು ಪವಿತ್ರಾ ಗೌಡ ತಮ್ಮ ಪರಪ್ಪನ ಅಗ್ರಹಾರದ ಜೈಲಿನ ಮುಂದೆ ಪ್ರಶ್ನಿಸಿದ್ದ. ಇದಕ್ಕೆ ನಿರೂಪಕರೊಬ್ಬರು ಬಾ.. ನಮ್ಗೆ ಕೆಲ್ಸ ಇಲ್ಲ.. ಶೇಡ್ಗೆ ಹೋಗಿ ಕುಂಟೆಬಿಲ್ಲ ಆಡುವ ಬಾ.. ಎಂದು ಗೇಲಿ ಮಾಡುವ ಮೂಲಕ ಪವಿತ್ರಾ ಗೌಡ ತಮ್ಮಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ತಿರುಗೇಟು ನೀಡಿದ್ದಾರೆ.