ನನಗೆ ಜಾಮೀನು ಕೊಡಿಸಿ: ಜೈಲಿನಿಂದಲೇ ನಿರ್ಮಾಪಕರು, ನಿರ್ದೇಶಕರಿಗೆ ‘ನಟ ದರ್ಶನ್’ ಕರೆ ಮಾಡಿ ದುಂಬಾಲು

Spread the love

ಬೆಂಗಳೂರು: ನನಗೆ ಜೈಲಿನಲ್ಲಿ ಇರೋಕೆ ಆಗ್ತಿಲ್ಲ. ನನಗೆ ಜಾಮೀನು ಕೊಡಿಸುವಂತೆ ಜೈಲಿನಿಂದಲೇ ನಿರ್ಮಾಪಕರು, ನಿರ್ದೇಶಕರಿಗೆ ಕರೆ ಮಾಡುತ್ತಿರುವಂತ ನಟ ದರ್ಶನ್ ದುಂಬಾಲು ಬೀಳುತ್ತಿರುವುದಾಗಿ ತಿಳಿದು ಬಂದಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.

ನ್ಯಾಯಾಂಗ ಬಂಧನದಲ್ಲಿನನಗೆ ಜಾಮೀನು ಕೊಡಿಸಿ: ಜೈಲಿನಿಂದಲೇ ನಿರ್ಮಾಪಕರು, ನಿರ್ದೇಶಕರಿಗೆ 'ನಟ ದರ್ಶನ್' ಕರೆ ಮಾಡಿ ದುಂಬಾಲು | Actor Darshanರುವಂತ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಂತ ಟೆಲಿಪೋನ್ ಬೂತ್ ನಿಂದ ವಾರಕ್ಕೆ ಮೂರು ಬಾರಿ ಕರೆ ಮಾಡೋದಕ್ಕೆ ಜೈಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ತನ್ನ ಸರದಿಯಲ್ಲದೇ ಜೈಲಿನಲ್ಲಿರುವಂತ ಇತರೆ ಖೈದಿಗಳ ಪೋನ್ ಕರೆ ಮಾಡುವಂತ ಅವಕಾಶವನ್ನು ನಟ ದರ್ಶನ್ ಬಳಸಿಕೊಳ್ಳುತ್ತಿರೋದಾಗಿ ತಿಳಿದು ಬಂದಿದೆ.

ಈವರೆಗೆ ತನ್ನ ಕುಟುಂಬಸ್ಥರಿಗೆ ಕರೆ ಮಾಡದಂತ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನ ಪೋನ್ ಬೂತ್ ನಿಂದ ಸ್ಯಾಂಡರ್ ವುಡ್ ನಿರ್ಮಾಪಕರು, ನಿರ್ದೇಶಕರಿಗೆ ಕರೆ ಮಾಡಿ, ನನಗೆ ಜಾಮೀನು ಕೊಡುವಂತೆ ದುಂಬಾಲು ಬೀಳುತ್ತಿದ್ದಾರೆ. ಹಗಲು-ರಾತ್ರಿ ನಿರ್ಮಾನಪಕರಿಗೆ ಕರೆ ಮಾಡಿ ನಟ ದರ್ಶನ್ ಜಾಮೀನಿಗೆ ಬೇಡಿಕೆ ಇಡುತ್ತಿರೋದಾಗಿ ತಿಳಿದು ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವಂತ ಅಕ್ಕ-ಪಕ್ಕದ ಖೈದಿಗಳ ಪೋನ್ ಕರೆಯ ಲಿಮಿಟ್ ಕೂಡ ಬಳಕೆ ಮಾಡುತ್ತಿರುವಂತ ನಟ ದರ್ಶನ್, ಸ್ಥಗಿತಗೊಂಡಿರುವಂತ ಕೆಲ ಸಿನಿಮಾಗಳ ಬಗ್ಗೆ ಕೂಡ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಲೋಕಾಯುಕ್ತ ಬಲೆಗೆ ಬಿದ್ದ ADLR&R.I.

Spread the loveಕೋಲಾರ : 30 ಸಾವಿರ ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತರ ಬಲೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ