Breaking News

ಅಗತ್ಯವಿದ್ದರೆ ಗೋವಾ ಸಿಎಂ ಜತೆ “ಕಳಸಾ ಬಂಡೂರಿ’ ಚರ್ಚೆ: ಶೆಟ್ಟರ್‌

Spread the love

ಬೆಳಗಾವಿ: ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗುವ ಮಹತ್ವಾಕಾಂಕ್ಷೆಯ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ನನ್ನ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಗತ್ಯವಿದ್ದರೆ ಗೋವಾ ಸಿಎಂ ಜತೆ ಮಾತುಕತೆ ಸಹ ನಡೆಸಲಾಗುವುದು ಎಂದು ಬೆಳಗಾವಿ ಕ್ಷೇತ್ರದ ನೂತನ ಸಂಸದ ಜಗದೀಶ್‌ ಶೆಟ್ಟರ್‌ ಹೇಳಿದರು.

Jagadish Shettar: ಅಗತ್ಯವಿದ್ದರೆ ಗೋವಾ ಸಿಎಂ ಜತೆ "ಕಳಸಾ ಬಂಡೂರಿ' ಚರ್ಚೆ: ಶೆಟ್ಟರ್‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳಸಾ ಬಂಡೂರಿ ಯೋಜನೆಯಡಿ ಈಗಾಗಲೇ ಕರ್ನಾಟಕಕ್ಕೆ 13 ಟಿಎಂಸಿ ನೀರು ಹಂಚಿಕೆಯಾಗಿದೆ. ಅಧಿಸೂಚನೆ ಸಹ ಹೊರಡಿಸಲಾಗಿದೆ. ಆದರೆ, ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸಿಗದಿರುವುದರಿಂದ ಸಮಸ್ಯೆಯಾಗಿದೆ. ಗೋವಾದವರು ಇಡೀ ಯೋಜನೆ ಜಾರಿ ಬಗ್ಗೆ ಆಕ್ಷೇಪ ಎತ್ತಿದರೂ ಅದರಿಂದ ಸಮಸ್ಯೆಯಾಗುವುದಿಲ್ಲ. ಈಗ ಯೋಜನೆ ಜಾರಿ ವಿಷಯ ವನ್ಯಜೀವಿ ಮಂಡಳಿ ಮುಂದೆ ಬಾಕಿ ಇದ್ದು, ಇದರ ತೆರವಿಗೆ ಪ್ರಯತ್ನಿಸಲಾಗುವುದು ಎಂದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ