Breaking News

ದಿಲ್ಲಿ ಗದ್ದುಗೆ ಏರಲು ‘NDA-INDIA’ ಭರ್ಜರಿ ಕಸರತ್ತು : ನಿತೀಶ್, ನಾಯ್ಡು ಮೇಲೆ ನಿಂತಿದೆ ಮೋದಿ ಭವಿಷ್ಯ!

Spread the love

ವದೆಹಲಿ : ನಿನ್ನೆ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎನ್ ಡಿ ಎ ಈ ಬಾರಿ 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮೋದಿ ಹೇಳಿದರು. ಆದರೆ ಕೇವಲ 294 ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಯಿತು.ಅದೇ ರೀತಿ ಇಂಡಿಯಾ ಮೈತ್ರಿಕೂಟ ನಿರೀಕ್ಷೆಗಿಂತಲೂ ಹೆಚ್ಚು ಸ್ಥಾನ ಪಡೆದುಕೊಂಡು ಬಿಜೆಪಿಗೆ ಶೆಡ್ಡು ಹೊಡೆದಿದೆ ಇದೀಗ ದಿಲ್ಲಿ ಗದ್ದುಗೆ ಏರಲು ಎನ್.ಡಿ.ಎ ಹಾಗೂ ಇಂಡಿಯಾ ಮೈತ್ರಿ ಕೂಟ ಕಸರತ್ತು ನಡೆಸುತ್ತಿದ್ದು ಇಂದು ಎರಡು ಪಕ್ಷಗಳು ಮಹತ್ವದ ಸಭೆ ನಡೆಸಲಿವೆ.ದಿಲ್ಲಿ ಗದ್ದುಗೆ ಏರಲು 'NDA-INDIA' ಭರ್ಜರಿ ಕಸರತ್ತು : ನಿತೀಶ್, ನಾಯ್ಡು ಮೇಲೆ ನಿಂತಿದೆ ಮೋದಿ ಭವಿಷ್ಯ!

ದೆಹಲಿಗೆ ಬರುವಂತೆ NDA ಮಿತ್ರ ಪಕ್ಷಗಳಿಗೆ ಬುಲಾವ್ ನೀಡಿರುವ ಹಿನ್ನೆಲೆಯಲ್ಲಿ ಇಂದು ದೆಹಲಿಗೆ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಪ್ರಯಾಣಿಸಲಿದ್ದಾರೆ. ಇದೀಗ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೋದಿ ಭವಿಷ್ಯ ನಿತೀಶ್ ಹಾಗೂ ಚಂದ್ರಬಾಬು ನಾಯ್ಡು ಅವರ ಮೇಲೆ ನಿಂತಿದೆ. ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುವುದು ತಿಳಿದುಬರಲಿದೆ. ಅಲ್ಲದೆ ಇಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡ ದೆಹಲಿಗೆ ಭೇಟಿ ನೀಡಲಿದ್ದಾರೆ. ಕೇಂದ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಇದೀಗ ಕಸರತ್ತು ನಡೆಸುತ್ತಿದೆ.

ಮೋದಿ ರಾಜೀನಾಮೆ

ನರೇಂದ್ರ ಮೋದಿಯವರು ಇಂದು ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದು ಅಲ್ಲದೆ ಅದಕ್ಕೂ ಮುಂಚೆ ಅವರು ಕೊನೆಯ ಕ್ಯಾಬಿನೆಟ್ ಮೀಟಿಂಗ್ ನಡೆಸಲಿದ್ದಾರೆ ಅದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರುಮಾ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.


Spread the love

About Laxminews 24x7

Check Also

ಮೊಹರಂ ಹಬ್ಬ‌ ಸಮೀಪ ಹಿನ್ನಲೆ, ಧಾರವಾಡದಲ್ಲಿ ಮೂರ್ತಿ ಪ್ರತಿಷ್ಠಾನ ಮುಖಂಡರ ಸಭೆ

Spread the love ಮೊಹರಂ ಹಬ್ಬ‌ ಸಮೀಪ ಹಿನ್ನಲೆ, ಧಾರವಾಡದಲ್ಲಿ ಮೂರ್ತಿ ಪ್ರತಿಷ್ಠಾನ ಮುಖಂಡರ ಸಭೆ…. ಪೊಲೀಸ್ ಇಲಾಖೆಗೆ ಅಗತ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ