Breaking News

ಸುಮಲತಾ ಅಂಬರೀಷ್​ಗೆ ಬಿಜೆಪಿಯಿಂದ ಮತ್ತೆ ನಿರಾಶೆ!

Spread the love

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸುಮಲತಾ (Sumalatha) ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಮಾಡಿಕೊಂಡಿದ್ದರಿಂದ ಆ ಕ್ಷೇತ್ರ ಜೆಡಿಎಸ್​ ಪಾಲಾಗಿತ್ತು.

ಸುಮಲತಾ ಬಿಜೆಪಿ ಸೇರಿದ್ದರಿಂದ ಮಂಡ್ಯ ಟಿಕೆಟ್ ಕೈತಪ್ಪಿತ್ತು. ಆದರೆ ಅವರಿಗೆ ವಿಧಾನ ಪರಿಷತ್​ (Legislative Council) ಟಿಕೆಟ್ ಸಿಗಬಹುದು ಎಂದು ನಂಬಲಾಗಿತ್ತು. ಆದರೆ ಭಾನುವಾರ ಘೋಷಣೆ ಮಾಡಿದ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಲತಾ ಅಂಬರೀಶ್‌ ಹೆಸರಿಲ್ಲ. ಸುಮಲತಾ ಅಂಬರೀಶ್‌ಗೆ ಎಂಎಲ್‌ಸಿ ಮಾಡಿದ್ರೆ ಪಕ್ಷ ಸಂಘಟನೆಗೆ ಯಾವುದೇ ಅನುಕೂಲ ಆಗುವುದಿಲ್ಲ ಎಂದು ಬಿಜೆಪಿ ನಿರ್ಧರಿಸಿದೆ.

Sumalatha: ಸುಮಲತಾ ಅಂಬರೀಷ್​ಗೆ ಬಿಜೆಪಿಯಿಂದ ಮತ್ತೆ ನಿರಾಶೆ! ಪರಿಷತ್ ಟಿಕೆಟ್ ಕೈತಪ್ಪಲು ಇದೇ ಕಾರಣ

ಸುಮಲತಾಗೆ ಮತ್ತೆ ನಿರಾಶೆ

ಅಲ್ಲದೆ ಘೋಷಣೆ ಮಾಡಿರುವ ಮೂರು ಟಿಕೆಟ್​ಗಳನ್ನ ಜಾತೀ ಆಧಾರದಲ್ಲಿ ಮಾಡಲಾಗಿದೆ. ಒಕ್ಕಲಿಗ ಕೋಟದಲ್ಲಿ ಸುಮಲತಾಗಿಂತ ಸಿ.ಟಿ.ರವಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್‌ಗೆ ಮುಂದೆ ಅವಕಾಶ ಕೊಡಲು ಹೈಕಮಾಂಡ್ ಚಿಂತನೆ ಮಾಡಿದೆ ಎನ್ನಲಾಗಿದೆ. ಭಾನುವಾರ ಬಿಜೆಪಿ ವಿಧಾನ ಪರಿಷತ್​ಗೆ ಸಿಟಿ ರವಿ, ಎನ್​ ರವಿಕುಮಾರ್ ಹಾಗೂ ಎಂಜಿ ಮುಳೆಗೆ ಟಿಕೆಟ್ ನೀಡಿದೆ. ಸಿಟಿ ರವಿ ಕಳೆದ ವಿಧಾನಸಭೆಯಲ್ಲಿ ಸೋಲುಕಂಡಿದ್ದರು. ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಕೋಟಾ ಶ್ರೀನಿವಾಸ್ ಪೂಜಾರಿಗೆ ಟಿಕೆಟ್ ನೀಡಿತ್ತು.


Spread the love

About Laxminews 24x7

Check Also

DCM ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ : ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ CBI

Spread the love ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ