Breaking News

ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು

Spread the love

ಕಾರ್ಕಳ:/ಅಜೆಕಾರು: ಮೀನು ಹಿಡಿಯಲು ತೆರಳಿದ್ದ ಒಂದೆ ಕುಟುಂಬದ ಇಬ್ಬರು ಸದಸ್ಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುದೆಲ್ಕಡಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ದರ್ಖಾಸು ನಿವಾಸಿ ವಿವಾಹಿತ ಹರೀಶ್ ಪೂಜಾರಿ( 43) ಮತ್ತು ಸಹೋದರಿ ಮಗ ಕೆರ್ವಾಶೆಯ ಪಾಚಾರಬೆಟ್ಟು ನಿವಾಸಿ ಬಾಲಕ ರಿತೇಶ್(17) ಮೃತ ದುರ್ದೈವಿಗಳು.

Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು

ಶಿರ್ಲಾಲುವಿನ ಮೂಡಯಿಗುಡ್ಡೆ ದರ್ಖಾಸು ನಿವಾಸಿ, ಸೇತು ಪೂಜಾರಿ ಕಮಲ ದಂಪತಿಗಳ ಪುತ್ರರಾಗಿರುವ ಹರೀಶ್ ಪೂಜಾರಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಬೇಸಗೆ ರಜೆ ಹಿನ್ನಲೆಯಲ್ಲಿ ಅಜ್ಜಿ ಮನೆಗೆ ಕೆರ್ವಾಶೆಯ ಶೆಟ್ಟಿಬೆಟ್ಟು ಪಾಚಾರ ಬೆಟ್ಟುವಿನಿಂದ ಅಕ್ಕನ ಮಗ ರಿತೇಶ್ ತನ್ನ ತಂದೆ- ತಾಯಿ, ಸಹೋದರಿ ಜತೆ ಶನಿವಾರ ಬಂದಿದ್ದರು.

ಹರೀಶ್ ಪೂಜಾರಿ ಮತ್ತು ರಿತೇಶ್ ಬಲೆ ಹಾಕಿ ಮೀನು ಹಿಡಿಯಲೆಂದು ಉಬ್ರೇಲು ಗುಂಡಿ ಕೆರೆಗೆ ತೆರಳಿದ್ದರು. ಮೀನು ಹಿಡಿಯಲೆಂದು ನೀರಿಗೆ ಇಳಿದಿದ್ದ ವೇಳೆ ರಿತೇಶ್ ಕಾಲು ಕೆಸರಿನಲ್ಲಿ ಸಿಲುಕಿಕೊಂಡು ಮುಳುಗಿದ್ದಾನೆ. ಆತನ ರಕ್ಷಣೆಗೆಂದು ತೆರಳಿದ ಮಾವ ಹರೀಶ್ ಪೂಜಾರಿ ಕೂಡ ಕೆಸರು ನೀರಿನಲ್ಲಿ ಸಿಲುಕಿಕೊಂಡು ಮುಳುಗಿ ಮೃತಪಟ್ಟರು.ಘಟನೆ ಮನೆಯ ಪಕ್ಕದಲ್ಲೆ ನಡೆದಿದೆ.


Spread the love

About Laxminews 24x7

Check Also

ಕೇಂದ್ರದ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಸುವರ್ಣಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

Spread the loveಬೆಳಗಾವಿ: ಕೇಂದ್ರ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ