Breaking News

ಯೋಧ’ ಸಿನಿಮಾ ಸೋಲಿಗೆ ಒಟಿಟಿ ಕಾರಣ ಎಂದ ರಾಶಿ ಖನ್ನಾ

Spread the love

ಬ್ಬರಿಗೆ ಸಿನಿಮಾ ಇಷ್ಟ ಆದರೆ, ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗುವುದಿಲ್ಲ. ಇದು ಅವರವರಿಗೆ ಬಿಟ್ಟ ಆಯ್ಕೆ. ಅದೇ ರೀತಿ ‘ಯೋಧ’ ಚಿತ್ರವನ್ನು ಒಂದಷ್ಟು ಮಂದಿ ಇಷ್ಟಪಟ್ಟರೆ, ಇನ್ನೂ ಕೆಲವರು ಇಷ್ಟಪಟ್ಟಿಲ್ಲ. ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 4 ಕೋಟಿ ರೂಪಾಯಿ.

ಇತ್ತೀಚೆಗೆ ರಿಲೀಸ್ ಆದ ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ಹಾಗೂ ರಾಶಿ ಖನ್ನಾ ನಟನೆಯ ‘ಯೋಧ’ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ಅಂದುಕೊಂಡ ರೀತಿಯಲ್ಲಿ ಕಮಾಯಿ ಮಾಡಿಲ್ಲ. ಭರ್ಜರಿ ಆಯಕ್ಷನ್, ದೊಡ್ಡ ಬಜೆಟ್ ಇದ್ದ ಹೊರತಾಗಿಯೂ ಸಿನಿಮಾ ಗಳಿಕೆ ಮಾಡಿದ್ದು ಕೇವಲ 30 ಕೋಟಿ ರೂಪಾಯಿ. ಇದು ಚಿತ್ರತಂಡದ ಬೇಸರಕ್ಕೆ ಕಾಣ ಆಗಿದೆ. ಈ ಸಿನಿಮಾದ ಗಳಿಕೆ ಕಡಿಮೆ ಆಗಿರುವ ಬಗ್ಗೆ ರಾಶಿ ಖನ್ನಾಮಾತನಾಡಿದ್ದಾರೆ. ಥಿಯೇಟರ್​ಗೆ ಜನರನ್ನು ಕರೆತರೋದು ಎಷ್ಟು ಚಾಲೆಂಜಿಂಗ್ ಎಂಬುದನ್ನು ಅವರು ಮಾತನಾಡಿದ್ದಾರೆ.

ಒಬ್ಬರಿಗೆ ಸಿನಿಮಾ ಇಷ್ಟ ಆದರೆ, ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗುವುದಿಲ್ಲ. ಇದು ಅವರವರಿಗೆ ಬಿಟ್ಟ ಆಯ್ಕೆ. ಅದೇ ರೀತಿ ‘ಯೋಧ’ ಚಿತ್ರವನ್ನು ಒಂದಷ್ಟು ಮಂದಿ ಇಷ್ಟಪಟ್ಟರೆ, ಇನ್ನೂ ಕೆಲವರು ಇಷ್ಟಪಟ್ಟಿಲ್ಲ. ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 4 ಕೋಟಿ ರೂಪಾಯಿ. ಸಿನಿಮಾದ ಒಟ್ಟಾರೆ ಗಳಿಕೆಯೂ ಸಾಕಷ್ಟು ಕಡಿಮೆ ಆಗಿದೆ. ಒಟಿಟಿ ವ್ಯಾಪ್ತಿ ಹೆಚ್ಚಿರುವುದೂ ಸಿನಿಮಾ ಸೋಲಿಗೆ ಕಾರಣ ಎಂಬುದು ರಾಶಿ ಅಭಿಪ್ರಾಯ.

‘ಕೆಲವರಿಗೆ ಸಿನಿಮಾ ಇಷ್ಟ ಆಗಬಹುದು, ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗದೇ ಇರಬಹುದು. ಎಲ್ಲಾ ರೀತಿಯ ಜನರೂ ಇರುತ್ತಾರೆ. ಸಿನಿಮಾ ರಿಲೀಸ್ ಆದಾಗ ಅದನ್ನು ಜನರು ಇಷ್ಟಪಡಬೇಕು ಎಂದು ನಾವು ಬಯಸುತ್ತೇವೆ. ಅವರನ್ನು ಥಿಯೇಟರ್​ಗೆ ಕರೆದುಕೊಂಡು ಬರೋದು ದೊಡ್ಡ ಚಾಲೆಂಜ್. ಎಲ್ಲಾ ಸಿನಿಮಾಗಳು ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ. ಇದನ್ನು ಸಿನಿಮಾ ನಿರ್ಮಾತೃರರು ಎದುರಿಸುತ್ತಿದ್ದಾರೆ’ ಎಂದಿದ್ದಾರೆ ರಾಶಿ ಖನ್ನಾ,

‘ನಾನು ಕೆಲವೊಮ್ಮೆ ಸಿನಿಮಾ ಒಟಿಟಿಯಲ್ಲಿ ಬರುತ್ತದೆ ಎಂದು ಥಿಯೇಟರ್​ಗೆ ಹೋಗದೇ ಇದ್ದಿದ್ದೂ ಇದೆ. ನಾನು ಬೇರೆ ಬೇರೆ ಕೆಲಸದಲ್ಲಿ ಬ್ಯುಸಿ ಇರುತ್ತೇನೆ. ಇದು ಕೂಡ ಒಂದು ಕಾರಣ. ಜನರು ಕೂಡ ಇತ್ತೀಚೆಗೆ ಹೆಚ್ಚು ಬ್ಯುಸಿ ಆಗಿದ್ದಾರೆ. ಅವರನ್ನು ಥಿಯೇಟರ್​ಗೆ ಕರೆತರುವುದೇ ಚಾಲೆಂಜ್. ಯೋಧ ಕೆಟ್ಟ ಸಿನಿಮಾ ಅಲ್ಲ. ಎಲ್ಲಾ ಸಿನಿಮಾಗಳಿಗೂ ಅದರದ್ದೇ ಆದ ನಿರ್ದಿಷ್ಟ ಸ್ಥಾನ ಇರುತ್ತದೆ. ಇದನ್ನು ಅರಿತು ಮುಂದಿನ ಸಿನಿಮಾ ಮಾಡಬೇಕು’ ಎಂದಿದ್ದಾರೆ ಅವರು.

ಸಿದ್ದಾರ್ಥ್ ಮಲ್ಹೋತ್ರಾಗೆ ದೊಡ್ಡ ಮಾರುಕಟ್ಟೆ ಇದೆ. ಆದಾಗ್ಯೂ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದ್ದು ಕೇವಲ 30 ಕೋಟಿ ರೂಪಾಯಿ. ಬಿಗ್ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರದಿಂದ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ನಷ್ಟ ಅನುಭವಿಸಿದೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ