ಕಾರವಾರ: ನನ್ನ ಎದುರು ಚುನಾವಣೆಗೆ ಸ್ಪರ್ಧೆ ಮಾಡುವ ಬಿಜೆಪಿಯ ಆಕಾಂಕ್ಷಿಗಳಿದ್ರೆ (BJP Ticket Aspiriant) ಬನ್ನಿ. ಈಗಲೇ ಬನ್ನಿ, ಧಮ್ ಇದ್ರೆ ಬನ್ನಿ ಎಂದು ಸಂಸದ ಅನಂತ ಕುಮಾರ್ ಹೆಗಡೆ (MP Ananthkumar Hegde) ಕುರ್ಚಿ ಹಿಡಿದಿರುವ ಘಟನೆ ನಡೆದಿದೆ. ಭಟ್ಕಳದ ಮಾವಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ (BJP Meeting) ಕುರ್ಚಿ ಮೇಲೆತ್ತಿ ಕಾರ್ಯಕರ್ತರ ಧೈರ್ಯವನ್ನು ಸಂಸದ ಅನಂತ ಕುಮಾರ್ ಹೆಗಡೆ ಪ್ರಶ್ನೆ ಮಾಡುವಂತೆ ಕಾಣಿಸುತ್ತಿತ್ತು.
