ಮುಂಬಯಿ: ಮುಸ್ಲಿಂ ಸಮುದಾಯವು (Muslim community) ತಮ್ಮ ಮನೆಯಲ್ಲಿ ಒಲೆ ಹೊತ್ತಿಸುವ ಹಿಂದುತ್ವದ ಬ್ರ್ಯಾಂಡ್ ಅನ್ನು ಬೆಂಬಲಿಸುತ್ತಿದೆ ಮತ್ತು ತಮ್ಮ ಮನೆಗಳನ್ನು ಸುಡುವ ಭಾರತೀಯ ಜನತಾ ಪಕ್ಷವನ್ನು (BJP) ತಿರಸ್ಕರಿಸುತ್ತಿದೆ ಎಂದು ಶಿವಸೇನಾ (Shivasena-UTB) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಹೇಳಿದರು.
ಮುಂಬಯಿ ನಲ್ಲಿ (mumbai) ಶಿವಸೇನಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯ ನಮ್ಮೊಂದಿಗೆ ಬರುತ್ತಿದೆ. ನಾನು ಶಿವಸೇನೆಯ ಪಕ್ಷದ ಮುಖ್ಯಸ್ಥ ಮತ್ತು ಹಿಂದೂ ಹೃದಯ ಸಾಮ್ರಾಟ್ ನ ಮಗ. ನಾನೇ ಕಟ್ಟಾ ಹಿಂದೂ. ನಮ್ಮ ಹಿಂದುತ್ವಕ್ಕೂ ಬಿಜೆಪಿಯ ಹಿಂದುತ್ವಕ್ಕೂ ವ್ಯತ್ಯಾಸವಿದೆ ಎಂದು ತಿಳಿಸಿದರು.
ರಾಮ ನಮ್ಮ ಹೃದಯದಲ್ಲಿದ್ದಾನೆ ಮತ್ತು ನಾವು ಮಾಡುವ ಕೆಲಸದಲ್ಲಿದ್ದಾನೆ. ಇದು ನಮ್ಮ ಹಿಂದುತ್ವ, ಮತ್ತು ನಾವು ದೇಶಭಕ್ತ ಹಿಂದೂಗಳು ಎಂದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಮತದಾರರನ್ನು ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿದೆ ಎಂದು ಆರೋಪಿಸಿದರು.
ಭಾರತೀಯ ಜನಸಂಘವು ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 26 ಮೀಸಲಾತಿ ನೀಡುವ ಠಾಕೂರ್ ಅವರ ನಿರ್ಧಾರವನ್ನು ವಿರೋಧಿಸಿತ್ತು. ಆದರೆ ಆದರೆ ಈಗ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಮರಣೋತ್ತರವಾಗಿ ಅವರಿಗೆ ಭಾರತ ರತ್ನವನ್ನು ಘೋಷಿಸಿದೆ. ಹಲವು ವರ್ಷಗಳ ಬಳಿಕ ಅವರ ಕಾರ್ಯವನ್ನು ಗುರುತಿಸಿರುವುದು ಸಂತೋಷ ಎಂದರು.
ಇನ್ನು ಡಾ. ಎಸ್ ಸ್ವಾಮಿನಾಥನ್ ಅವರ ಆಯೋಗವು ಮಾಡಿದ ಶಿಫಾರಸನ್ನು ಜಾರಿಗೊಳಿಸಲು ವಿಫಲವಾಗಿರುವ ಎನ್ ಡಿಎ ಸರ್ಕಾರ ಈಗ ಅವರಿಗೆ ಭಾರತ ರತ್ನ ಘೋಷಿಸಿದೆ. ಜನರು ಈ ಪೊಳ್ಳುತನವನ್ನು ನೋಡುತ್ತಾರೆ ಎಂದರು.