ಕಲಬುರಗಿ: ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ 48 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಶರಣನಗರದಲ್ಲಿ ಘಟನೆ ನಡೆದಿದ್ದು, ಶರಣಮ್ಮ ಶಿವಲಿಂಗಪ್ಪಾ ಖೇಡ್(48) ಅವರು ಬಾವಿಗೆ ಹಾರಿ ಜೀವನವನ್ನು ಅಂತ್ಯ ಮಾಡಿಕೊಂಡಿದ್ದಾರೆ.
ಮಕ್ಕಳಾಗಲಿ ಎಂದು ನೂರು ದೇವರಿಗೆ ಹರಕೆ ಹೊತ್ತಿದ್ದ ಅವರ ಯಾವ ಪ್ರಯತ್ನವೂ ಫಲಿಸಿರಲಿಲ್ಲ. ಇದರಿಂದ ಜಿಗುಪ್ಸೆಗೊಂಡು ಅವರು ಪ್ರಾಣತ್ಯಾಗದ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.