Breaking News

ಲಾಠಿ ಚಾರ್ಜ್ ಘಟನೆ​ ಬಳಿಕ ಅಧಿಕಾರ ವಹಿಸಿಕೊಂಡ ನೂತನ ಎಸ್​ಪಿ.. ಜಲ್ನಾದಲ್ಲಿ ಇಂದಿನಿಂದ ಸೆ. 17ರ ವರೆಗೆ ಕರ್ಫ್ಯೂ ಜಾರಿ

Spread the love

ಜಲ್ನಾ (ಮಹಾರಾಷ್ಟ್ರ) : ಮರಾಠಾ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ ನಂತರ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದೋಷಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಅವರ ಸ್ಥಾನಕ್ಕೆ ಈಗ ನೂತನ ಎಸ್ಪಿ ಶೈಲೇಶ್ ಬಳಕವಾಡೆ ಅಧಿಕಾರ ವಹಿಸಿಕೊಂಡಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಲಿದ್ದೇನೆ ಎಂದು ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶೈಲೇಶ್ ಬಳಕವಾಡೆ, ನಾನು ಸಾಮಾನ್ಯ ಮನುಷ್ಯನಂತೆ ಕೆಲಸ ಮಾಡುತ್ತೇನೆ. ಅಂತರವಳ್ಳಿ ಸಾರತಿ ಗ್ರಾಮಕ್ಕೆ ತೆರಳಿ ಪ್ರತಿಭಟನಾಕಾರ ಮನೋಜ ಜಾರಂರನ್ನು ಭೇಟಿ ಮಾಡುತ್ತೇನೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಸಮಸ್ಯೆ: ಪ್ರಸ್ತುತ ಮರಾಠಾ ಮೀಸಲಾತಿ ಚಳವಳಿಯಿಂದಾಗಿ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರಿದೆ. ಹಾಗೆಯೇ ಸೆ.6ರಂದು ಶ್ರೀಕೃಷ್ಣ ಜಯಂತಿ, ಸೆ.7ರಂದು ಗೋಪಾಲಕಳ, ಸೆ.14ರಂದು ಪೋಲ ಉತ್ಸವ ಹಾಗೂ ಸೆ.17ರಂದು ಮರಾಠವಾಡ ಮುಕ್ತಿ ಸಂಗ್ರಾಮ ದಿನ ಆಚರಿಸಲಾಗುತ್ತದೆ. ಈ ಉತ್ಸವಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಮೆರವಣಿಗೆಗಳು ಮತ್ತು ಇತರ ಕಾರ್ಯಕ್ರಮಗಳು ನಡೆಯುತ್ತವೆ.

ಪ್ರಸ್ತುತ ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ವಿವಿಧ ಕಾರಣಗಳಿಗಾಗಿ ಪರಸ್ಪರ ಆರೋಪ ಮಾಡುತ್ತಿವೆ. ಅಲ್ಲದೆ, ಮರಾಠಾ ಮೀಸಲಾತಿ ಬೇಡಿಕೆ ಹಾಗೂ ರೈತರ ವಿವಿಧ ಬೇಡಿಕೆಗಳಿಗಾಗಿ ವಿವಿಧ ಸಂಘಟನೆಗಳು ಉಪವಾಸ ಸತ್ಯಾಗ್ರಹ, ಧರಣಿ ಮೆರವಣಿಗೆ, ರಸ್ತೆ ತಡೆ ಇತ್ಯಾದಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದ್ದರಿಂದ, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಜಲ್ನಾ, ಮಹಾರಾಷ್ಟ್ರ ಪೊಲೀಸ್ ಕಾಯಿದೆ, 1951 ರ ಸೆಕ್ಷನ್ 31 (1) ಮತ್ತು (3) ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿ, ಈ ಮೂಲಕ ಕೆಲವೊಂದು ನಿರ್ದೇಶನಗಳನ್ನು (ಜಲ್ನಾ ಜಿಲ್ಲೆಯಲ್ಲಿ) ಹೊರಡಿಸಲಾಗಿದೆ.

ರಾಜ್ಯದ ಭದ್ರತೆ ಮುಖ್ಯ: ಸರ್ಕಾರಿ ಕರ್ತವ್ಯಗಳನ್ನು ನಿರ್ವಹಿಸುವ ನೌಕರರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಕೋಲುಗಳು, ಬಂದೂಕುಗಳು, ಕತ್ತಿಗಳು, ಈಟಿಗಳು, ಚಾಕುಗಳು ಮತ್ತು ಇತರ ದೈಹಿಕ ಗಾಯಗಳು ಅಥವಾ ಹಾನಿಯನ್ನುಂಟು ಮಾಡುವ ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು. ಸುಲಭವಾಗಿ ನಿಭಾಯಿಸಬಹುದಾದ ಚೂಪಾದ ವಸ್ತುಗಳು ಅಥವಾ ಸ್ಫೋಟಕಗಳಂತಹ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಬರಬಾರದು. ಉದ್ದೇಶಪೂರ್ವಕವಾಗಿ ವ್ಯಕ್ತಿಗಳು ಅಥವಾ ಗುಂಪುಗಳ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಆವೇಶದ ಮಾತು, ವಿವಾದಾತ್ಮಕ ಭಾಷಣ ಮಾಡಬಾರದು. ಪ್ರತಿಕೃತಿಗಳನ್ನು ಪ್ರದರ್ಶಿಸುವಂತಿಲ್ಲ. ಚಿತ್ರಗಳು, ಚಿಹ್ನೆಗಳು, ಘೋಷಣೆಗಳು ಅಥವಾ ಸಭ್ಯತೆ ಅಥವಾ ಸುವ್ಯವಸ್ಥೆಗೆ ಭಂಗ ತರುವ ಅಥವಾ ರಾಜ್ಯದ ಭದ್ರತೆಗೆ ಅಪಾಯವನ್ನುಂಟುಮಾಡುವ ಯಾವುದೇ ವಸ್ತುವನ್ನು ಒಯ್ಯಬಾರದು ಎಂಬ ನಿರ್ದೇಶನಗಳನ್ನು ಹೊರಡಿಸಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ