Breaking News

ದಾವಣಗೆರೆಯಲ್ಲಿ ಜೈಲಿನ ಗೋಡೆ ಜಿಗಿದು ಪರಾರಿಯಾಗಿದ್ದ ಅತ್ಯಾಚಾರ ‌ಪ್ರಕರಣದ ಆರೋಪಿ ಸೆರೆ

Spread the love

ದಾವಣಗೆರೆ: ಅತ್ಯಾಚಾರ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಆರೋಪಿಯೋರ್ವ ಜೈಲಿನಿಂದ ಪರಾರಿಯಾಗಿರುವ ಘಟನೆ ಕಳೆದ ದಿನ ಶನಿವಾರ ಸಂಜೆ ನಡೆದಿತ್ತು.

ಆದರೆ ಇದೀಗ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಸಂತ (23) ಜೈಲಿನಿಂದ ಪರಾರಿಯಾಗಿದ್ದ ಆರೋಪಿ.

ದಾವಣಗೆರೆ ನಗರದ ಉಪ‌ಕಾರಾಗೃಹದ ಗೋಡೆ ಜಿಗಿದು ಪರಾರಿಯಾದ ಆರೋಪಿ ವಸಂತ್​ನನ್ನು ಹಿಡಿಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ದಾವಣಗೆರೆ ನಗರದ ಹೊರವಲಯದ ಕರೂರು ಪ್ರದೇಶದ ನಿವಾಸಿ ವಸಂತ ವೃತ್ತಿಯಿಂದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಸಂತ್ ವಿರುದ್ಧ ಕಳೆದ ಎರಡು ದಿನಗಳ‌ ಹಿಂದೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ದಾಖಲಾದ ಹಿನ್ನೆಲೆಯಲ್ಲಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಕಳೆದ ಶನಿವಾರ ಉಪ ಕಾರಾಗೃಹದ ಗೋಡೆ ಜಿಗಿದು ಆರೋಪಿ ವಸಂತ್ ಪರಾರಿಯಾಗಿದ್ದ. ಜಿಗಿದ ಪರಿಣಾಮ ಆರೋಪಿ ಕಾಲಿಗೆ ಪೆಟ್ಟಾಗಿತ್ತು, ಆದರೂ ಅದನ್ನು ಲೆಕ್ಕಿಸದೇ ಪರಾರಿಯಾಗಿದ್ದ. ಇದಾದ ಕೆಲ ಹೊತ್ತಿನ ನಂತರ ಜೈಲ್ ಸಿಬ್ಬಂದಿಗೆ ಮಾಹಿತಿ‌ ತಿಳಿದಿದ್ದು, ಆರೋಪಿಯನ್ನು ಹುಡುಕಿದರು ಕೂಡ ಪತ್ತೆಯಾಗಿರಲಿಲ್ಲ. ಇದರ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.‌

ಕೊನೆಗೂ ಬಂಧಿಸಿದ ಬಸವನಗರ ಪೊಲೀಸರು: ಕಳೆದ ದಿನ ಜೈಲಿನಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ವಸಂತ್​ನನ್ನು ಬಸವನಗರ ಠಾಣೆಯ ಪೊಲೀಸರು ಬಂಧಿಸಿ ಕರೆತಂದಿದ್ದೇವೆ ಎಂದು ಬಸವನಗರ ಪೊಲೀಸ್ ಠಾಣೆಯ ಪಿಎಸ್‌ಐ ದೂರವಾಣಿ ಮೂಲಕ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.


Spread the love

About Laxminews 24x7

Check Also

ಸಿಎಂ ಬದಲಾವಣೆ ಚರ್ಚೆ: ಹೈಕಮಾಂಡ್​​ ನಿರ್ಧಾರ ಅಂತಿಮ:ಡಾ.ಜಿ.ಪರಮೇಶ್ವರ್

Spread the love ಬೆಂಗಳೂರು: “ಸಿಎಂ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್​​ ನಿರ್ಧಾರವೇ ಅಂತಿಮ. ಸಂದರ್ಭ ಬಂದಾಗ ಅವರು ಸಿಎಲ್​ಪಿ ಸಭೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ