Breaking News

ಮಹಾರಾಷ್ಟ್ರ, ಆಂಧ್ರದಂತೆ ಸಿನಿಮಾ​ ಟಿಕೆಟ್ ಬೆಲೆ ಕಡಿಮೆ ಮಾಡಿ: ಹಿರಿಯ ನಟ ಅಶೋಕ್

Spread the love

ಸಿನಿಮಾ ಟಿಕೆಟ್​ ಬಗ್ಗೆ ಹಿರಿಯ ನಟ ಅಶೋಕ್ ಮಾತನಾಡಿರುವುದು..ಕನ್ನಡ ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡುತ್ತಿವೆ.

ಅದ್ಧೂರಿ ಮೇಕಿಂಗ್ ಜೊತೆಗೆ ಬೆಸ್ಟ್‌ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಪ್ರಿಯರನ್ನು ಆಕರ್ಷಿಸುತ್ತಿವೆ. ಸ್ಯಾಂಡಲ್​ವುಡ್​ನಲ್ಲಿ ಹೊಸ ಸಿನಿಮಾಗಳ ಭರಾಟೆ ಜೋರಾಗಿದೆ. ಆದರೆ ಚಿತ್ರಮಂದಿರಗಳು ಮಾತ್ರ ಮಂಕಾಗಿವೆ. ಪ್ರೇಕ್ಷಕರು ಅಷ್ಟಾಗಿ ಚಿತ್ರಮಂದಿರಗಳತ್ತ ಬರುತ್ತಿಲ್ಲ ಅನ್ನೋದು ಮಾಲೀಕರ ಅಳಲು. ಇದರ ಎಫೆಕ್ಟ್ ನಿರ್ಮಾಪಕರು ಹಾಗೂ ಚಿತ್ರಮಂದಿರದ ಮಾಲೀಕರಿಗೆ ತಟ್ಟುತ್ತಿದೆ.

ಓಟಿಟಿಯಲ್ಲಿ ಶೀಘ್ರ ಬಿಡುಗಡೆ: ಅಷ್ಟಕ್ಕೂ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಏಕೆ ಬರುತ್ತಿಲ್ಲ ಅನ್ನೋದಕ್ಕೆ ಹಲವು ಕಾರಣಗಳಿವೆ. ಮೊದಲನೆಯದು, ಯಾವುದೇ ಹೊಸ ಸಿನಿಮಾ ಅಥವಾ ಸ್ಟಾರ್ ನಟರ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದ ಒಂದೇ ತಿಂಗಳಿಗೆ ಓಟಿಟಿಯಲ್ಲಿ ಪ್ರಸಾರ ಪ್ರಾರಂಭಿಸುವುದು. ಈ ಹಿಂದೆ ಯಾವುದೇ ಸ್ಟಾರ್ ಸಿನಿಮಾ ಥಿಯೇಟರ್​​ನಲ್ಲಿ ಬಿಡುಗಡೆ ಆದ ಆರು ಅಥವಾ ಎಂಟು ತಿಂಗಳ ಬಳಿಕ ಟಿವಿ ಆಥವಾ ಓಟಿಟಿಯಲ್ಲಿ ರಿಲೀಸ್ ಆಗುತ್ತಿತ್ತು. ಆಗ ಜನರು ಥಿಯೇಟರ್​ಗೆ ಬರುತ್ತಿದ್ದರು. ಆದ್ರೀಗ ಸಿನಿಮಾಗಳು ಕೆಲವೇ ದಿನಗಳೊಳಗೆ ಓಟಿಟಿಯಲ್ಲಿ ಬರುತ್ತೆ ಅಲ್ವಾ ಅನ್ನೋ ಕಾರಣಕ್ಕೆ ಅದೆಷ್ಟೋ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಮುಖ‌ ಮಾಡುತ್ತಿಲ್ಲ.

ಮಲ್ಟಿಪ್ಲೆಕ್ಸ್​​ಗಳಲ್ಲಿ ಟಿಕೆಟ್ ದುಬಾರಿ: ಇದರ ಜೊತೆಗೆ ಪ್ರೇಕ್ಷಕರಿಗೆ ದೊಡ್ಡ ಹೊರೆಯಾಗಿರುವ ವಿಷಯವೆಂದರೆ, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​​ಗಳಲ್ಲಿ ಅತಿಯಾದ ಟಿಕೆಟ್ ಬೆಲೆ. ಹೌದು, ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಲ್ಲಿ 150 ರೂಪಾಯಿಂದ 250 ರೂಪಾಯಿ, ಮಲ್ಟಿಪ್ಲೆಕ್ಸ್​​ಗಳಲ್ಲಿ 250 ರೂಪಾಯಿಯಿಂದ ಹಿಡಿದು 1,500 ರೂಪಾಯಿ ಇದೆ. ಸಹಜವಾಗಿ ಒಂದು ಫ್ಯಾಮಿಲಿ ಮಲ್ಟಿಪ್ಲೆಕ್ಸ್​​ನಲ್ಲಿ ಸಿನಿಮಾ‌ ನೋಡಬೇಕಾದ್ರೆ, ಟಿಕೆಟ್, ಪಾಪ್ ಕಾರ್ನ್, ‌ಕೂಲ್ ಡ್ರಿಂಕ್ಸ್, ಕಾರು ಪಾರ್ಕಿಂಗ್ ಅಂತಾ ಸೇರಿ‌ ಸುಮಾರು ಸಾಕಷ್ಟು ಹಣ ಖರ್ಚಾಗುತ್ತದೆ. ಇದೆನ್ನೆಲ್ಲಾ ಲೆಕ್ಕ ಹಾಕುವ ಮನೆ ಯಜಮಾನ, ಸಿನಿಮಾಗಳನ್ನು ಮನೆಯಲ್ಲೇ ಓಟಿಟಿಯಲ್ಲಿ ಫ್ಯಾಮಿಲಿ ‌ಸಮೇತ ನೋಡಬಹುದು ಅಂತಾ ಅಂದುಕೊಳ್ಳುತ್ತಾರೆ.

ಟಿಕೆಟ್​ ದರ ಇಳಿಸಿ: ಇನ್ನೂ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿರುವಂತೆ ಸಿನಿಮಾ ಟಿಕೆಟ್ ಬೆಲೆಯನ್ನು 60 ರೂಪಾಯಿಯಿಂದ 100 ರೂಪಾಯಿ ಮಾಡಬೇಕು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಎಸಿ 80 ರೂ., ನಾನ್ ಎಸಿ 60 ರೂ. ಇದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಕೂಡ 100 ರೂಪಾಯಿ ಟಿಕೆಟ್ ಬೆಲೆ ಇದೆ. ಇದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಹೊರೆ ಆಗಲ್ಲ. ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಮಾದರಿಯಂತೆ ಕರ್ನಾಟಕದಲ್ಲಿ ಟಿಕೆಟ್​ ಬೆಲೆ 60 ರೂ.ನಿಂದ 100 ರೂ. ಆಗಬೇಕು ಅಂತಾ ಹಿರಿಯ ನಟ ಅಶೋಕ್ ಹೇಳಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ