ಹುಕ್ಕೇರಿ ಮತಕ್ಷೇತ್ರದಲ್ಲಿ ಈ ಬಾರಿ ಜನತೆ ಜೆ ಡಿ ಎಸ್ ಪಕ್ಷ ಬೆಂಬಲಿಸಲಿದ್ದಾರೆ ಎಂದು ಜೆ ಡಿ ಎಸ್ ಮುಖಂಡೆ ಶರೀಫಾ ನದಾಫ್ ಹೇಳಿದರು.
ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಆಡಳಿತದಿಂದ ಕ್ಷೇತ್ರದ ದಲ್ಲಿ ಯಾವದೇ ಅಭಿವೃದ್ಧಿ ಕಾರ್ಯ ಜರುಗಿಲ್ಕಾ ವಿಷೇಶವಾಗಿ ಮಹಿಳೆಯರ ಸಮಸ್ಯೆ,ಯುವಕರಿಗೆ ಉದ್ಯೋಗ ಮತ್ತು ಅಭಿವೃದ್ಧಿ ಗಳು ವಂಚಿತರಾಗಿದ್ದಾರೆ ಕಾರಣ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೆಗೌಡರ ದೂರದೃಷ್ಟಿಂದ ಪ್ರಣಾಳಿಕೆಯಲ್ಲಿ ಬಡವರ ಅಭಿವೃದ್ಧಿ ಮತ್ತು ಆರ್ಥಿಕವಾಗಿ ಸಬಲತೆ ಹೊಂದುವ ಯೋಜನೆಗಳಿಗೆ ಜನರು ಜೆ ಡಿ ಎ ಸ್ ಬೆಂಬಲಿಸಲಿದ್ದಾರೆ ಕಾರಣ ನಾನು ಜೆ ಡಿ ಎಸ್ ಪಕ್ಷದಿಂದ ಅಭ್ಯರ್ಥಿ ಯಾಗ ಬಯಸಿದ್ದು ಪ್ರಥಮಬಾರಿಗೆ ಒಬ್ಬ ಮಹಿಳೆಗೆ ಮತನೀಡಿ ಆಶಿರ್ವದಿಸಲಿದ್ದಾರೆ ಎಂದರು.
ರಾಜ್ಯ ನಾಯಕರಾದ ಶಮಶುಲ್ಲಾ ಖಾನ, ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ, ಮುಖಂಡರಾದ ಶಂಕರ ಮಾಡಲಗಿ, ಮಾಡಿವಾಲೆ ಮೊದಲಾದವರ ಸಂಪರ್ಕ ಹೊಂದಿ ಟಿಕೇಟ್ ಕೇಳಿದ್ದೆನೆ ಈ ಬಾರಿ ನನಗೆ ಟಿಕೇಟ್ ಸಿಗುವ ಸಂಭವವಿದೆ ಎನ್ನುವ ವಿಶ್ವಾಸ ಹೊಂದಿದ ಶರಿಫಾ ನದಾಫ್ ಗೆ ಟಿಕೇಟ್ ಸಿಗುವದೆ ಎನ್ನುವದನ್ನು ಕಾದು ನೋಡಬೇಕಾಗಿದೆ.