Breaking News

ನಾಳೆಯಿಂದ ಜಾತ್ರಾ ಮಹೋತ್ಸವ

Spread the love

ಮುಗಳಖೋಡ: ಸಮೀಪದ ಕಟಕಬಾವಿ ಗ್ರಾಮದ ಪಿಡಾಯಿ ತೋಟದಲ್ಲಿ 4ನೇ ವರ್ಷದ

ಕ್ಕಮ್ಮದೇವಿ ಹಾಗೂ ಧರಿದೇವರ ಪುಣ್ಯಾಶ್ರಮದ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಫೆ. 9ರಿಂದ 13ರವರೆಗೆ ನಡೆಯಲಿದೆ.

ಅಭಿನವ ಧರೇಶ್ವರ ಸ್ವಾಮೀಜಿ ಜಕ್ಕಮ್ಮದೇವಿ ಹಾಗೂ ಧರಿದೇವರ ಪುಣ್ಯಾಶ್ರಮ ಕಟಕಬಾವಿ ಅವರ ಸಾನ್ನಿಧ್ಯದಲ್ಲಿ ಸರ್ವ ಕಾರ್ಯಕ್ರಮಗಳು ಜರುಗುವವು.

9ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ, ಅದೇ ದಿನ ಪಲ್ಲಕ್ಕಿಗಳು ಸುಕ್ಷೇತ್ರ ರಾಮನಕಟ್ಟಿಗೆ ಸ್ನಾನಕ್ಕೆ ಹೋಗುತ್ತವೆ. ಅದೇ ದಿನ ಸಂಜೆ 6 ಗಂಟೆಗೆ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ಜರುಗುವುದು.

ಶುಕ್ರವಾರ 10ರಂದು ಅಭಿನವ ಧರೇಶ್ವರ ಸ್ವಾಮಿಗಳ ಕಿರೀಟ ಪೂಜಾ ಕಾರ್ಯಕ್ರಮ ಜರುಗುವುದು. ನಂತರ ಮಹಿಳೆಯರ ಉಡಿತುಂಬುವ ಕಾರ್ಯಕ್ರಮ, ಜಂಗಿ ನಿಕಾಲಿ ಕುಸ್ತಿಗಳು, ಟಗರಿನ ಕಾಳಗ, ಸ್ವಾಮಿಗಳ ತುಲಾಭಾರ ಸೇರಿದಂತೆ ಡೊಳ್ಳಿನ ಗಾಯನ ಹಾಗೂ ಸಕಲ ಜನಪದ ಗಾಯನಗಳು ನಡೆಯುವವು.

ಹೆಚ್ಚಿನ ಮಾಹಿತಿಗಾಗಿ 9980032543, 9481105667, 7353149637 ಸಂಪರ್ಕಿಸಬಹುದು.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ