Breaking News

ಬೆಳಗಾವಿಯ ನಾಗರಾಜು ‘ಸುತ್ತೂರು ಕೇಸರಿ’, ಮಂಜು ‘ಸುತ್ತೂರು ಕುಮಾರ’

Spread the love

ನಂಜನಗೂಡು (ಮೈಸೂರು ಜಿಲ್ಲೆ): ಎರಡು ವರ್ಷಗಳ ನಂತರ ರಂಗೇರಿದ್ದ ಸುತ್ತೂರು ಕುಸ್ತಿ ಅಖಾಡದಲ್ಲಿ ಕುಸ್ತಿಪ್ರಿಯರ ಶಿಳ್ಳೆ- ಚಪ್ಪಾಳೆಗಳ ನಡುವೆ ಬೆಳಗಾವಿಯ ನಾಗರಾಜು ಹಾಗೂ ಶ್ರೀರಂಗಪಟ್ಟಣದ ಮಂಜು ಕ್ರಮವಾಗಿ ‘ಸುತ್ತೂರು ಕೇಸರಿ’ ಹಾಗೂ ‘ಸುತ್ತೂರು ಕುಮಾರ’ ಪ್ರಶಸ್ತಿ ಗೆದ್ದರು.

 

ಸುತ್ತೂರು ಉಚಿತ ಶಾಲೆಯ ಮೈದಾನದ ಅಖಾಡದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ನಡೆದ 41ನೇ ರಾಷ್ಟಮಟ್ಟದ ಸುತ್ತೂರು ಕುಸ್ತಿ ಸ್ಪರ್ಧೆಯ ಹಣಾಹಣಿಯಲ್ಲಿ ಬೆಳಗಾವಿ ನಾಗರಾಜು ಹರಿಯಾಣದ ಪೈಲ್ವಾನ್‌ ಬಂಟಿ ಅವರನ್ನು ಮಣಿಸಿದರು.

ಒಂದು ಗಂಟೆಗೂ ಹೆಚ್ಚು ಜಿದ್ದಾಜಿದ್ದಿ ನಡೆದರೂ ಫಲಿತಾಂಶ ದೊರೆಯಲಿಲ್ಲ. ನಂತರ 10 ನಿಮಿಷದ ಪಾಯಿಂಟ್‌ ಕುಸ್ತಿಯಲ್ಲಿ 1-0 ಅಂತರದಲ್ಲಿ ನಾಗರಾಜು ಅವರು ಗೆದ್ದು ‘ಸುತ್ತೂರು ಕೇಸರಿ’ ಎನಿಸಿದರು. ಗದೆ, ಪಾರಿತೋಷಕ ಹಾಗೂ ₹25ಸಾವಿರ ಬಹುಮಾನ ತಮ್ಮದಾಗಿಸಿಕೊಂಡರು.

ಶ್ರೀರಂಗಪಟ್ಟಣದ ಮಂಜು ಹಾಗೂ ಮೈಸೂರಿನ ರಮ್ಮನಹಳ್ಳಿ ರವಿ ಎರಡೂವರೆ ಗಂಟೆ ಕಾದಾಡಿದರೂ ಫಲಿತಾಂಶ ಸಿಗಲಿಲ್ಲ. ನಂತರ ನಡೆದ ಪಾಯಿಂಟ್‌ ಕುಸ್ತಿಯಲ್ಲಿ 7-6 ಅಂತರದಲ್ಲಿ ರೋಚಕ ಜಯ ಸಾಧಿಸಿದ ಮಂಜು, ‘ಸುತ್ತೂರು ಕುಮಾರ್‌’ ಆದರು.

60 ಜೊತೆ ಕುಸ್ತಿಪಟುಗಳು ಸ್ಪರ್ಧಿಸಿದ್ದರು. ತೀರ್ಪುಗಾರರಾಗಿ ಪೈಲ್ವಾನ್ ಕೆಂಪೇಗೌಡ ಅಮೃತ್ ಪುರೋಹಿತ್, ರವಿ ಬನ್ನೂರು, ಸಿದ್ದರಾಜು ನಂಜನಗೂಡು, ಮಲ್ಲುಸ್ವಾಮಿ, ಅಶೋಕಪುರಂ ಕೃಷ್ಣ, ಬಸ್ತಿಪುರ ದೇವರಾಜು ನಿರ್ವಹಿಸಿದರು.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ