Breaking News

ಎಂ.ಬಿ. ಪಾಟೀಲ್ ಸಿಎಂ ಆಗಲಿ ಅಂತ ಶಬರಿಮಲೆವರೆಗೆ ಪಾದಯಾತ್ರೆ ಹೊರಟ ‘ರಾಜಕುಮಾರ’.!

Spread the love

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ಮುಖ್ಯಮಂತ್ರಿಯಾಗಲಿ ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತ ರೈತನೋರ್ವ ಶಬರಿಮಲೆಗೆ ಏಕಾಂಗಿಯಾಗಿ ಪಾದಾಯಾತ್ರೆ ಬೆಳೆಸಿದ್ದಾರೆ.

ತಿಕೋಟಾ ತಾಲೂಕಿನ ಬಾಬಾನಗರದ ರೈತ ರಾಜಕುಮಾರ ರವೀಂದ್ರ ಹೊನವಾಡ ಪಾದಯಾತ್ರೆ ಕೈಗೊಂಡಿದ್ದಾರೆ.

ಕೊರಳಲ್ಲಿ ಎಂ.ಬಿ. ಪಾಟೀಲರ ಭಾವಚಿತ್ರ ಕಟ್ಟಿಕೊಂಡು ತಲೆ ಮೇಲೆ ಇರುಮುಡಿ ಹೊತ್ತು ರಾಜಕುಮಾರ ಪಾದಯಾತ್ರೆ ಕೈಗೊಂಡಿದ್ದಾರೆ.

ಒಟ್ಟು 5.5 ಎಕರೆ ಹೊಲ ಹೊಂದಿರುವ ಈ ರೈತ ದ್ರಾಕ್ಷಿ ಬೆಳೆಗಾರರಾಗಿದ್ದಾರೆ. ತಮ್ಮ ಭಾಗ ಈಗ ನೀರಾವರಿಯಾಗಿದ್ದು, ಇದಕ್ಕೆಲ್ಲ ಕಾರಣರಾದ ಎಂ. ಬಿ. ಪಾಟೀಲರು ರಾಜಕೀಯವಾಗಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ, ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತಿದ್ದಾಗಿ ತಿಳಿಸಿದ್ದಾರೆ.

ಡಿ. 6 ರಿಂದ ಬಾಬಾನಗರದಿಂದ ಪಾದಯಾತ್ರೆ ಆರಂಭಿಸಿದ್ದು, ಈಗ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಾಟಿ ಪಾದಯಾತ್ರೆ ಮುಂದವರೆಸಿದ್ದಾರೆ. ಪ್ರತಿದಿನ ಸುಮಾರು 40 ಕಿಮೀ ಪಾದಯಾತ್ರೆ ನಡೆಸುತ್ತಿದ್ದು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಎಂ.ಬಿ. ಪಾಟೀಲರ ಭಾವಚಿತ್ರಕ್ಕೆ ಪೂಜೆ ಮಾಡುವುದಾಗಿ ರಾಜಕುಮಾರ ತಿಳಿಸಿದ್ದಾರೆ. ಸುಮಾರು 1300 ಕಿಮೀ. ಪಾದಯಾತ್ರೆ ಇದಾಗಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನದ ಬಳಿಕ ಬಾಬಾನಗರಕ್ಕೆ ಮರಳಿ ಕೃಷಿಯಲ್ಲಿ ತೊಡಗುವುದಾಗಿ ರಾಜಕುಮಾರ ರವೀಂದ್ರ ಹೊನವಾಡ ತಿಳಿಸಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ