Breaking News

ಬಾವನಸೌಂದತ್ತಿ-ಅಂಕಲಿಯ ಮಧ್ಯೆ ಹದಗೆಟ್ಟ ರಸ್ತೆ,

Spread the love

ರಾಯಬಾಗದಿಂದ ಚಿಕ್ಕೋಡಿ ತಾಲೂಕಿಗೆ ಸಂಪರ್ಕಿಸುವ ಅಂಕಲಿ -ಬಾವನಸವದತ್ತಿ ರಸ್ತೆಯ ಮಧ್ಯ ಭಾಗದಲ್ಲಿರುವ ಸೇತುವೆ ಮೇಲೆ ಡಾಂಬರ್ ಸಂಪೂರ್ಣ ಕಿತ್ತು ಹೋಗಿದೆ. ಅನೇಕ ಗುಂಡಿಗಳು ನಿರ್ಮಾಣವಾಗಿವೆ. ಇವು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಗುಂಡಿಗಳು ತಪ್ಪಿಸಲು ಹೋಗಿ ಅನೇಕ ಅಪಘಾತ ಸಂಭವಿಸುತ್ತಿವೆ.

ಚಿಕ್ಕೋಡಿ,ರಾಯಬಾಗ ತಾಲೂಕಿಗೆ ಜೋಡಿಸುವ ಈ ರಸ್ತೆಯಾಗಿದ್ದು, ಬಾವನ ಸೌಂದತ್ತಿ, ಜಲಾಲಪುರ ದಿಗ್ಗೆವಾಡಿ, ಶಿವಶಕ್ತಿ ಸಕ್ಕರೆ ಕಾರ್ಖಾನೆ, ರಾಯಬಾಗ ಪಟ್ಟಣ, ಹಾಗೂ ಪ್ರಸಿದ್ದ ಶ್ರೀ ಮಾಯಕ್ಕ ಚಿಂಚಲಿಗೆ ಹೋಗುವ ಮುಖ್ಯ ರಸ್ತೆಯಾಗಿದೆ.ಚಿಕ್ಕೋಡಿ ಸಕ್ಕರೆ ಕಾರ್ಖಾನೆಗೆ ಸಾವಿರಾರು ಟನ್ ಕಬ್ಬು ಪ್ರತಿನಿತ್ಯ ಈ ರಸ್ತೆಯಿಂದಲೇ ಹೋಗುತ್ತದೆ. ದಿನನಿತ್ಯ ಈ ಸೇತುವೆ ಮೇಲೆ ಸಾವಿರಾರು ವಾಹನಗಳು ಓಡಾಡುತ್ತವೆ.

ರಸ್ತೆ ಇಷ್ಟೊಂದು ಹದಕ್ಕೆಟ್ಟರೂ ಸಹ ಚಿಕ್ಕೋಡಿ ಲೋಕೊಪಯೋಗಿ ಇಲಾಖೆಯವರು ಇತ್ತ ಗಮನಹರಿಸುತ್ತಿಲ್ಲ. ಈ ಭಾಗದ ಜನರ ಸುಮಾರು ದಿನಗಳ ಜನರ ಬೇಡಿಕೆ ಆಗಿದ್ದ ಈ ಸೇತುವೆ 2017 ರಲ್ಲಿ ಅಂದಿನ ಲೋಕಸಭಾ ಸದಸ್ಯರಾದ ಪ್ರಕಾಶ ಹುಕ್ಕೇರಿ ಅವರು ಈ ಸೇತುವೆ ಎತ್ತರಗೊಳಿಸಿ ಜನರಿಗೆ ಅನುಕೂಲ ಮಾಡಿ ಕೊಟ್ಟಿದ್ದರು. ಸೇತುವೆಯ ಮೇಲಿನ ರಸ್ತೆ ಹಾಳಾದಗಿನಿಂದ ಇಂದಿನವರೆಗೆ ಎರಡು ಬಾರಿ ಕೃಷ್ಣಾ ನದಿ ಪ್ರವಾಹ ಬಂದು ಡಾಂಬರೀಕರಣ ಕಿತ್ತುಹೋಗಿದೆ.


Spread the love

About Laxminews 24x7

Check Also

ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ

Spread the loveಸವದತ್ತಿ; ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ ಧಾರವಾಡದ ಮುರುಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ