ಬಿಎಸ್ವೈ ಸ್ವಾಗತಕ್ಕೆ ಬರಲಿಲ್ಲ ನಾಯಕರು
ಬಿಜೆಪಿ ನಗರ ಘಟಕ ಮತ್ತು ಘಟಕ ಅಧ್ಯಕ್ಷರು ಸೇರಿ ಯಾರೊಬ್ಬರೂ ಬಂದಿರಲಿಲ್ಲ. ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಮುಖಂಡರು ಭಾಗಿಯಾಗಿದ್ದರು. ಪ್ರಹ್ಲಾದ ಜೋಶಿ, ಜಗದೀಶ್ ಶೆಟ್ಟರ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನಾಯಕರು ಬಿಜಿಯಾಗಿದ್ದರು. ಬೆಳಗಾವಿ ಜಿಲ್ಲೆಯ ಕೆಲ ನಾಯಕರು ಆಗಮಿಸಿ ಯಡಿಯೂರಪ್ಪರನ್ನು ಏರ್ ಪೋರ್ಟ್ ನಿಂದ ಕರೆದೊಯ್ದರು.
ಏಕಾಂಗಿಯಾದ್ರಾ ರಾಜಾಹುಲಿ!
ಪ್ರತಿ ಬಾರಿ ಯಡಿಯೂರಪ್ಪ ಹುಬ್ಬಳ್ಳಿ ಏರ್ ಪೋರ್ಟ್ ಗೆ ಬಂದಾಗ ಜನಜಂಗುಳಿ ವಾತಾವರಣ ಇರ್ತಿತ್ತು. ಬಿಜೆಪಿ ನಾಯಕರು ಅಭೂತಪೂರ್ವ ಸ್ವಾಗತ ಕೋರುತ್ತಿದ್ದರು. ಆದರೆ ಈ ಬಾರಿ ಯಾರೊಬ್ಬರೂ ಬಾರದೇ ಇರೋದು ಅಚ್ಚರಿಗೆ ಕಾರಣವಾಗಿದೆ. ಬಿಡಿಎ ಹಗರಣದ ಕೇಸ್ ಬಳಿಕ ನಾಯಕರು, ಯಡಿಯೂರಪ್ಪ ಅವರ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ. ರಾಜಾಹುಲಿ ಏಕಾಂಗಿಯಾದ್ರಾ ಅನ್ನೋ ಚರ್ಚೆ ನಡೆದಿದೆ.