Breaking News

ಸಿದ್ದರಾಮೋತ್ಸವದಲ್ಲಿ ಮಿಸ್ಸಿಂಗ್​ ಆಗಿದ್ದ ಜಮಖಂಡಿ ವ್ಯಕ್ತಿ ಹುಬ್ಬಳ್ಳಿಯಲ್ಲಿ ಕೊನೆಗೂ ಪತ್ತೆ! ನಿಜವಾಯ್ತು ಸಿದ್ದು ‘ಭವಿಷ್ಯ’

Spread the love

ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಗಲಕೋಟೆಯ ಗಿರಿಮಲ್ಲ ಖಂಡೇಕರ್ ಎಂಬುವವರು ಕೊನೆಗೂ ಒಂದೂವರೆ ತಿಂಗಳ ಬಳಿಕ ಕೊನೆಗೂ ಪತ್ತೆಯಾಗಿದ್ದಾರೆ.

ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ನಿವಾಸಿ ಗಿರಿಮಲ್ಲ ಖಂಡೇಕರ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ.

ಕಳೆದ ಅಗಸ್ಟ್​ 2 ರಂದು ಗ್ರಾಮಸ್ಥರ ಜತೆಗೆ ಇವರು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಆದರೆ ಮನೆಗೆ ವಾಪಸಾಗಿರಲಿಲ್ಲ. ಅಡಿಹುಡಿ ಗ್ರಾಮದಿಂದ ಬಸ್ ಮೂಲಕ 50 ಜನ ತೆರಳಿದ್ದ ಇವರು ವಾಪಸಾಗದೇ ಮನೆಯವರೆಲ್ಲರೂ ಚಿಂತೆಗೀಡಾಗಿದ್ದರು.

‘ದುಡ್ಡಿನ ಆಮಿಷ ಒಡ್ಡಿ ಮಗನನ್ನು ಕರೆದುಕೊಂಡು ಹೋಗಲಾಗಿತ್ತು. ಈಗ ಆತ ಪತ್ತೆಯಿಲ್ಲ’ ಎಂದು ಗಿರಿಮಲ್ಲ ತಾಯಿ ಕಣ್ಣೀರು ಹಾಕಿದ್ದರು. ಇದು ಭಾರಿ ಸುದ್ದಿಯಾಗುತ್ತಲೇ ಖುದ್ದಿ ಸಿದ್ದರಾಮಯ್ಯ ಗಿರಿಮಲ್ಲ ಅವರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದರು. ‘ನಿಮ್ಮ ಮಗ ವಾಪಸ್​ ಬಂದೇ ಬರುತ್ತಾನೆ’ ಎಂದಿದ್ದರು. ‘ಗಿರಿಮಲ್ಲ ಜೀವಂತ ಇದ್ದಾನೆ, ಅವನಿಗೆ ಏನೂ ಆಗಿಲ್ಲ, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದಷ್ಟು ಬೇಗ ನಿಮ್ಮ ಮಗ ಮನೆಗೆ ಬರ್ತಾನೆ’ ಎಂದಿದ್ದ ಸಿದ್ದರಾಮಯ್ಯ, ‘ಸೆ. 27ಕ್ಕೆ ಮತ್ತೆ ಬಂದು ಆರ್ಥಿಕ ಸಹಾಯ ಮಾಡುವೆ’ ಎಂದಿದ್ದರು.

ಮಗ ಬರುತ್ತಾನೆ ಎನ್ನುವ ಸಿದ್ದರಾಮಯ್ಯ ಅವರ ಭವಿಷ್ಯ ನಿಜವಾಗಿದೆ. ಪೊಲೀಸರ ಸತತ ಹುಡುಕಾಟದಿಂದ ಗಿರಿಮಲ್ಲ ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ಗ್ರಾಮಕ್ಕೆ ಗಿರಿಮಲ್ಲ ಅವರನ್ನು ಗ್ರಾಮಸ್ಥರು ಕರೆತಂದಿದ್ದು, ಗ್ರಾಮದಲ್ಲೀಗ ಸಂತಸ ಮನೆ ಮಾಡಿದೆ. ಒಂದೂವರೆ ತಿಂಗಳಿನಿಂದ ಅವರು ಏನು ಮಾಡುತ್ತಿದ್ದರು, ಹೇಗೆ ತಪ್ಪಿಸಿಕೊಂಡರು ಎಂಬ ಬಗ್ಗೆ ಇನ್ನಷ್ಟೇ ವಿಷಯ ತಿಳೀಯಬೇಕಿದೆ.


Spread the love

About Laxminews 24x7

Check Also

ಕಂಗ್ರಾಗಳಗಲ್ಲಿಯ ಪಿಜಿಯಲ್ಲಿ ವಿದ್ಯಾರ್ಥಿ ನಿ ನೇಣು ಬಿಗಿದುಕೊಂಡ ಘಟನೆ ನಡೆದಿದೆ.

Spread the loveಕಂಗ್ರಾಗಳಗಲ್ಲಿಯ ಪಿಜಿಯಲ್ಲಿ ವಿದ್ಯಾರ್ಥಿಯೋರ್ವವಳು ಆತ್ಮಹ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಸವದತ್ತಿ ಮೂಲದ ಪವಿತ್ರಾ ಎಂಬ ವಿಧ್ಯಾರ್ಥಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ