Breaking News

ಬೆಳಗಾವಿಯಲ್ಲಿ ನಕಲಿ‌ ಪತ್ರಕರ್ತರ ಬಳಿಕ ನಕಲಿ ಪೊಲೀಸರು; ಐವರ ಬಂಧನ

Spread the love

ಬೆಳಗಾವಿ: ನಾಲ್ವರು ನಕಲಿ‌ ಪತ್ರಕರ್ತರನ್ನು ಬಂಧಿಸಿರುವ ಬೆಳಗಾವಿ ಪೊಲೀಸರು ಈಗ ಐವರು ನಕಲಿ‌ ಪೊಲೀಸರನ್ನು ಬಂಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ತಾಲೂಕಿನ ಸುಳೇಭಾವಿ ಗ್ರಾಮದ ಜಾಕೀರಹುಸೇನ್ ಕುತ್ಬುದ್ದಿನ್ ಮನಿಯಾರ(42), ಬಸವರಾಜ ಗುರಪ್ಪ ಪಾಟೀಲ(32), ಸರ್ವೇಶ ಮೋಹನ ತುಡವೇಕರ(38), ಸೇಹಲಾಹ್ಮದ ಶಾಹಬುದ್ದಿನ್ ತರಸಗಾರ(41) ಹಾಗೂ ನಯೀಮ್‌ ಮಹ್ಮದಶಫೀ ಮುಲ್ಲಾ(30) ಎಂಬಾತರನ್ನು ಬಂಧಿಸಲಾಗಿದೆ.

 

ರಾಮತೀರ್ಥ ನಗರದ ಅತಾವುಲ್ಲಾ ಮಹ್ಮದಹಯಾತ್ ಹೊನಗೇಕರ ಎಂಬವರು ಕಾರಿನಲ್ಲಿ ಹೊರಟಿದ್ದಾಗ ಇಂಡಿಕಾ ಕಾರಿನಲ್ಲಿ ಬಂದ ಐವರು ಪೊಲೀಸರು ಎಂದು ಹೇಳಿ ವಾಹನ ತಪಾಸಣೆ ನಡೆಸಿದ್ದಾರೆ.‌ ನಿಮ್ಮ‌ ಕಾರಿನಲ್ಲಿಗಾಂಜಾ ಇದೆ ಎಂದು ಹೇಳಿ, ಕಿತ್ತೂರು ಪೊಲೀಸ್ ಠಾಣೆಗೆ ಬ್ಯಾಗ್ ತೆಗೆದುಕೊಂಡು ಹೋಗುವುದಾಗಿ ಹೇಳಿ 4.79 ಲಕ್ಷ ರೂ.‌ದೋಚಿದ್ದಾರೆ. ಈ ಬಗ್ಗೆ ಅತಾವುಲ್ಲಾ ಕಿತ್ತೂರು ಠಾಣೆಯಲ್ಲಿ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಐವರನ್ನು ಬಂಧಿಸಿ 70 ಸಾವಿರ ರೂ.‌ನಗದು ಹಣ ಹಾಗೂ ಇಂಡಿಕಾ ಕಾರು, ನಕಲಿ ಪ್ರೆಸ್ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ – ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ– -ಎಸಿಪಿ ನಾರಾಯಣ ಬರಮನಿ

Spread the love ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ – ಜೀವನದ ಆದರ್ಶಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ