Breaking News

ವಿರೋಧ ಪಕ್ಷಗಳ ರಾಜಕೀಯ ಷಡ್ಯಂತ್ರಕ್ಕೆ ಸೋಲುಂಟಾಗಿದೆ ಎಂದ ಅರುಣ್ ಶಹಾಪೂರ್

Spread the love

ಹಣದ ಪ್ರವಾಹ ಹಾಗೂ ರಾಜಕೀಯ ಷಡ್ಯಂತ್ರದ ನಡುವೆಯೂ ನನ್ನ ಪರವಾಗಿ ಮತ ಚಲಾಯಿಸಿದ ಶಿಕ್ಷಕರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ನು ಈ ಚುನಾವಣೆಯಲ್ಲಿ ನಾನು ಸೋಲನ್ನು ಕಂಡಿದ್ದು ನಾನದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದು ಸೋತ ಅಭ್ಯರ್ಥಿ ಅರುಣ್ ಶಹಾಪೂರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ವಾಯವ್ಯ ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅರುಣ್ ಶಹಾಪೂರ್, ನನ್ನ ಪರವಾಗಿ ಮತ ಚಲಾವಣೆ ಮಾಡಿರುವ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಣದ ಪ್ರವಾಹ, ರಾಜಕೀಯ ಷಡ್ಯಂತ್ರದಿಂದ ನನಗೆ ಸೋಲುಂಟಾಗಿದೆ.

ಈ ಸೋಲಿನಿಂದ ಸಾಕಷ್ಟು ಪಾಠ ಕಲಿತಿದ್ದ ಸೋಲನ್ನ ಸ್ಪರ್ಧಾತ್ಮಕವಾಗಿ ಸ್ವೀಕಾರ ಮಾಡ್ತೇನಿ.

ಪಕ್ಷದ ಎಲ್ಲರೂ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಪ್ರಜಾತಂತ್ರದಲ್ಲಿ ನಂಬಿಕೆ ಇದೆ, ಶಿಕ್ಷಕರ ಪರವಾಗಿ ಇದ್ದೇನೆ. ಶಿಕ್ಷಕರು ಹಣಕ್ಕೆ ಮಾರಾಟ ಮಾಡಿಕೊಂಡಿದ್ದಾರೆ ಅನೋದಿಲ್ಲ. ಸೋಲಿಗೆ ಕಾರಣ, ಆತ್ಮಾವಲೋಕ ಮಾಡಿಕೊಳ್ಳುತ್ತೇವೆ. ಹಣ ಹೊಳೆ ಹರಿಸಿದ್ದರಿಂದ ಹಾಗೂ ವಿರೋಧ ಪಕ್ಷಗಳ ರಾಜಕೀಯ ಷಡ್ಯಂತ್ರಕ್ಕೆ ಸೋಲುಂಟಾಗಿದೆ ಎಂದರು.


Spread the love

About Laxminews 24x7

Check Also

ಪಾಸ್ ಪೋರ್ಟ್​ಗೆ ಸುಳ್ಳು ದಾಖಲೆಗೆ ಸಹಕಾರ: ಪೊಲೀಸ್ ಸಿಬ್ಬಂದಿ ಬಂಧನ

Spread the love ಬಂಟ್ವಾಳ (ದಕ್ಷಿಣಕನ್ನಡ): ಪಾಸ್​ ಪೋರ್ಟ್ ಮಾಡಲು ಸುಳ್ಳು ದಾಖಲೆ ನೀಡಿದ ವ್ಯಕ್ತಿಗೆ ಸಹಕಾರ ನೀಡಿದ ಆರೋಪದಲ್ಲಿ ವಿಟ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ