Breaking News

ರೈತನ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಶ್ರೀಮಂತ ಪಾಟೀಲ

Spread the love

ಅಥಣಿ : ಎರಡು ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆ ಕಳೆದುಕೊಂದಿದ್ದ ಬಡ ರೈತ ಕಲ್ಲಪ್ಪ ಅವರಿಗೆ ಸರಕಾರ ಹೊಸ ಮನೆ ಮಂಜೂರು ಮಾಡಿ ಎರಡು ಕಂತು ಕೂಡ ನೀಡಿದೆ. ಆದರೆ, ಮೂರನೇ ಕಂತಿಗೆ ಸಹಾಯಕಾಗಿ ಎರಡು ವರ್ಷ ಕಳೆದರೂ ಅಧಿಕಾರಿಗಳು ನಿರ್ಲಕ್ಷ ಮಾಡಿದರು. ಕೊನೆಗೆ ಈ ಬಡ ರೈತ ಶಾಸಕರಾದ ಶ್ರೀಮಂತ ಪಾಟೀಲರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡಿದ್ದಾರೆ. ತಕ್ಷಣ ಸ್ಪಂದಿಸಿದ ಶಾಸಕರು ಶಾಸಕರು ನೇರವಾಗಿ ಕೃಷ್ಣಾ ಕಿತ್ತೂರಿಗೆ ತೆರಳಿ ಅಧಿಕಾರಿಗಳನ್ನು ಕರೆಸಿ ಹಣ ಮಂಜೂರು ಮಾಡಿಸಿದ್ದಾರೆ.

ಕೃಷ್ಣಾ ಕಿತ್ತೂರಿನ ರೈತ ಕಲ್ಲಪ್ಪ ಸಾವಗಾಂವ ಅವರ ಮನೆಗೆ 2019-20ರಲ್ಲಿ ನೀರು ನುಗ್ಗಿತ್ತು. ಅದರ ಪುನರ್ನಿರ್ಮಾಣಕ್ಕಾಗಿ ಅಧಿಕಾರಿಗಳು ಸಮೀಕ್ಷೆ ನಡೆಸಿ ಹೊಸ ಮನೆಯನ್ನು ಅನುಮೋದಿಸಿದರು. ಇದಕ್ಕಾಗಿ ಸಾವಗಾಂವ್‌ ಐವರಿಗೆ ಎರಡು ಕಂತುಗಳನ್ನೂ ನೀಡಿದ್ದರು. ಆದರೆ, ಮೂರನೇ ಕಂತು ಎರಡು ವರ್ಷಗಳಿಂದ ವಿಳಂಬವಾಗಿತ್ತು. ಹಾಗಾಗಿ ಮನೆಗೆಲಸ ಅಪೂರ್ಣವಾಯಿತು. ಅಂಗವಿಕಲರಾದ ಕಲ್ಲಪ್ಪ ಸಾವಗಾಂವ ಅವರು ಆಗಾಗ ಸರಕಾರಿ ಕಚೇರಿಗಳ ಹೊಸ್ತಿಲನ್ನು ಸವೆಸುತ್ತಿದ್ದರು. ಆದರೆ, ಯಾರೂ ಅವರಬಗ್ಗೆ ಅನುಕಂಪ ತೋರಲಿಲ್ಲ


Spread the love

About Laxminews 24x7

Check Also

ಚಿಕ್ಕೋಡಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ನೆರವೇರಿಸಿದರು.

Spread the love ಚಿಕ್ಕೋಡಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಸಂಸದೆ ಪ್ರಿಯಾಂಕಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ