Breaking News

ನಾನು ಕಾನೂನು ಪ್ರಕಾರ ಖರೀದಿಸಿದ್ದೇನೆ: ಹೊನ್ಯಾಳ ಜಮೀನು ವಿವಾದ: ನಾಗೇಶ ದೇಸಾಯಿ ಸ್ಪಷ್ಟನೆ

Spread the love

ಬೆಳಗಾವಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ದೇವಸ್ಥಾನ ಜಮೀನು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನಾಗೇಶ್ ದೇಸಾಯಿ ತಮ್ಮ ಮೇಲಿನ ಆರೋಪ ಸುಳ್ಳು. ನಾನು ಕಾನೂನು ಪ್ರಕಾರವೇ ಆ ಜಮೀನನ್ನು ಖರೀದಿ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೊನ್ಯಾಳ ಗ್ರಾಮಸ್ಥರು ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನ ಜಾಗ ದೇವಸ್ಥಾನಕ್ಕೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗ್ರಾಮೀಣ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ವಿಚಾರಕ್ಕೆ ಹಾಗೂ ತಮ್ಮ ಮೇಲಿನ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನಾಗೇಶ್ ದೇಸಾಯಿ ಕೋರ್ಟಗಿಂತ ಯಾರೂ ದೊಡ್ದವರಲ್ಲ. ಕಾಯ್ದೆ, ಕಾನೂನು ದೊಡ್ಡದಿದೆ. ನಿಮ್ಮ ಮೇಲೆ ನಿಮಗೆ ವಿಶ್ವಾಸ ಇದ್ದರೆ ಹೀಗ್ಯಾಕೆ ಮಾಡುತ್ತಿದ್ದಿರಿ.

ಕಾಯ್ದೆ, ಕಾನೂನು ಬಿಡೋಣ ದೇವರ ಮೇಲೆಯಾದ್ರೂ ವಿಶ್ವಾಸ ಇದೆಯೋ ಇಲ್ಲವೋ..? ದೇಮವ್ವನ ಗುಡಿ ಜಾಗ ಆಗಿದ್ದರೆ ದೇಮವ್ವ ತೆಗೆದುಕೊಳ್ಳತಾಳಲ್ಲ. ನನ್ನ ಸತ್ಯ ಇದ್ದರೆ ನಂಗೆ ಕೊಡ್ತಾಳೆ, ನಿಮ್ಮದು ಸತ್ಯ ಆಗಿದ್ರೆ ದೇವಿ ತೆಗೆದುಕೊಳ್ತಾಳಲ್ಲ. ಇಷ್ಟು ಯಾಕೆ ದಾದಾಗಿರಿ, ಜಾತ್ರೆ ಮಾಡೋದು ಯಾಕೆ..? ನಾನು ಕಾನೂನು ಪ್ರಕಾರವೇ ಖರೀದಿ ಮಾಡಿದ್ದೇನೆ.


Spread the love

About Laxminews 24x7

Check Also

ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

Spread the love ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ