ಈ ಬಾರಿ 2023ಕ್ಕೆ ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬರೋದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನಿಮ್ಮ ವಿರುದ್ಧ ವಯಕ್ತಿಕ ಷಡ್ಯಂತ್ರ ನಡೆಯುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಈ ಬಾರಿ ಯಾವುದೇ ರೀತಿಯ ವಯಕ್ತಿಕ ಸೇಡಿನ ರಾಜಕಾರಣ ನಡೆಯೋದಿಲ್ಲ. ಈ ಬಾರಿ 2023ಕ್ಕೆ ಜನತಾ ಸರ್ಕಾರ ಬರೋದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ನಿಮ್ಮ ಸರ್ಕಾರ ಕೆಡವಿದ ಕೆಲ ಶಾಸಕರಿಗೆ ಎಲ್ಲಿಯೂ ನೆಲೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ಗೆ ಸಂಪರ್ಕ ಮಾಡಬಹುದಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸರ್ಕಾರ ಕೆಡವಿದವರು ಈಗಾಗಲೇ ಬಿಜೆಪಿಯಲ್ಲಿ ಉತ್ತಮವಾದ ಸ್ಥಾನಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಯಾರೋ ಒಬ್ಬರೋ ಇಬ್ಬರಿಗೋ ಸಮಸ್ಯೆ ಆಗಿರಬಹುದು. ಮುಂದೆ ಯಾವ ರೀತಿಯ ಬದಲಾವಣೆ ಆಗುತ್ತದೆ ಎನ್ನುವುದನ್ನು ಈಗಲೇ ನಿರ್ಧಾರ ಮಾಡಲು ಆಗಲ್ಲ. ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ಸರ್ಕಾರ ಕೆಡವಿದವರಿಗೆ ತಪ್ಪಿನ ಅರಿವಾಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅದನ್ನು ಅವರನ್ನೇ ಕೇಳಬೇಕು ಎಂದರು.