Breaking News

ಮತ್ತೊಂದು ಪೋಸ್ಟರ್ ಬಿಟ್ಟು ಮತ್ತೆ ತಲೆಗೆ ಹುಳಬಿಟ್ಟ ಉಪೇಂದ್ರ:

Spread the love

ಬೆಂಗಳೂರು: ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ..!

– ಇದು ರಿಯಲ್​ ಸ್ಟಾರ್​ ಉಪೇಂದ್ರ ನಾಯಕನಾಗಿ ಅಭಿನಯಿಸಿ, ನಿರ್ದೇಶಿಸಿದ್ದ ಮೊದಲ ಚಿತ್ರ ‘A’ಗೆ ಕೊಟ್ಟಿದ್ದ ಟ್ಯಾಗ್​ಲೈನ್. ಹೀಗೆ ಆರಂಭದಿಂದಲೂ ಚಿತ್ರವಿಚಿತ್ರ ಟೈಟಲ್​, ವಿಶಿಷ್ಠ ಕಥೆ, ನಿರೂಪಣೆ ಇತ್ಯಾದಿಯಿಂದ ತಮ್ಮದೇ ಟ್ರೆಂಡ್​ ಸೆಟ್ ಮಾಡಿರುವ ಉಪೇಂದ್ರ ಇದೀಗ ತಮ್ಮ ನಿರ್ದೇಶನದ ಮತ್ತೊಂದು ಚಿತ್ರದ ಶೂಟಿಂಗ್​ಗೆ ಮುಂದಾಗಿದ್ದು, ಮುಹೂರ್ತಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಚಿತ್ರರಸಿಕರ ತಲೆಗೆ ಮತ್ತೆ ಹುಳ ಬಿಟ್ಟಿದ್ದಾರೆ.

 

ಹಿಂದಿನಂತೆ ಈ ಚಿತ್ರಕ್ಕೂ ಉಪೇಂದ್ರ ವಿಶಿಷ್ಟವಾದ ಟೈಟಲ್​ ಇಟ್ಟಿದ್ದು, ಸಿನಿಪ್ರಿಯರು ಅದನ್ನು ತಮಗೆ ಬೇಕಾದಂತೆ ವಿಶ್ಲೇಷಿಸುತ್ತಿದ್ದಾರೆ. ಟೈಟಲ್​ ನೋಂದಣಿ ಪ್ರಕಾರ ಇದನ್ನು ‘ಯುಐ’ ಎಂದು ಹೇಳಲಾಗುತ್ತಿದ್ದರೂ, ಶೀರ್ಷಿಕೆಯನ್ನು ಬರೀ ಒಂದು ಲಾಂಛನದ ರೀತಿಯಲ್ಲಿ ತಿಳಿಸಿರುವುದರಿಂದ ನಾನಾ ಅರ್ಥ ಹೊಮ್ಮಿಸುತ್ತಿದೆ. ಈ ಚಿತ್ರದ ಮೊದಲ ಪೋಸ್ಟರ್ ಬಿಟ್ಟಾಗಲೇ ಹೀಗೆ ಕುತೂಹಲ ಕೆರಳಿಸಿದ್ದ ಉಪ್ಪಿ, ಇಂದು ಮತ್ತೊಂದು ಪೋಸ್ಟರ್ ಬಿಟ್ಟು ಮೆದುಳಿಗೆ ಮೇವಾಗಿಸಿದ್ದಾರೆ.


Spread the love

About Laxminews 24x7

Check Also

ತಗ್ಗುತ್ತಿದೆ ಪೆಟ್ರೋಲ್‌ ಕಾರುಗಳ ಬೇಡಿಕೆ: ಸಿಎನ್‌ಜಿಯಲ್ಲಿ ಬರುತ್ತಿದೆ 3 ಆಕರ್ಷಕ ಎಸ್​ಯುವಿಗಳು

Spread the loveಬೆಂಗಳೂರು (ಜೂ. 19): ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಸಿಎನ್‌ಜಿ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ