Breaking News

ಹುಕ್ಕೇರಿ: ವಿಜೃಂಭಣೆಯ ಲಕ್ಷ್ಮೀದೇವಿ ಜಾತ್ರೆ

Spread the love

ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶುಕ್ರವಾರ ಮಹಾಲಕ್ಷ್ಮೀ (ಮಲೆವ್ವ)ದೇವಿ ಮತ್ತು ದುರ್ಗಾದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಜಡಿಸಿದ್ಧೇಶ್ವರ ಆನಂದಾಶ್ರಮದಿಂದ ಪ್ರಮುಖ ಬೀದಿಗಳ ಮೂಲಕ ಮಹಾಲಕ್ಷ್ಮೀದೇವಿ ಮಂದಿರದವರೆಗೆ ಮೆರವಣಿಗೆಯಲ್ಲಿ ಬಂದರು.

ನಂತರ ದೇವಿಗೆ ಉಡಿ ತುಂಬುವುದು ಮತ್ತು ಮಹಿಳೆಯರಿಗೆ ಉಡಿ ತುಂಬುವ (ಬೊಟ್ಟು ಕೊಡುವ) ಕಾರ್ಯಕ್ರಮ ಜರುಗಿತು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ದೇವಿಯ ದರ್ಶನ ಪಡೆದರು.

ಸಚಿವರ ಭೇಟಿ: ಶುಕ್ರವಾರ ಮುಂಜಾನೆ ಅರಣ್ಯ, ಆಹಾರ ಖಾತೆ ಸಚಿವ ಉಮೇಶ್ ಕತ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಜಾತ್ರೆಗಳು ಸಮಾಜದ ಸಾಂಸ್ಕೃತಿಕ ಪ್ರತಿಬಿಂಬಗಳು. ಜಾತ್ರೆಗಳು ಜನರ ಮನಸ್ಸು ಒಗ್ಗೂಡಿಸುವ ಮಾರ್ಗವಾಗಿದ್ದರಿಂದ ಹಿರಿಯರು ಆಚರಿಸುತ್ತ ಬಂದಿದ್ದಾರೆ. ಜನರು ಭಕ್ತಿಭಾವದಿಂದ ಜಾತ್ರೆ ಆಚರಿಸಬೇಕು ಎಂದರು. ಮುಖಂಡರಾದ ದಿಲೀಪ ವಾಳಿಕಿಂಡಿ, ಶಿವಾಜಿ ಸಂಜೀವಗೋಳ, ಬಸವರಾಜ ಹೂಲಿ, ಲಕ್ಷ್ಮಣ ಹೂಲಿ, ಸಂಜು ಮಾಡಲಗಿ, ಕುಮಾರ ಕಳಸಪ್ಪಗೋಳ, ವಿಠ್ಠಲ ಮಾಡಲಗಿ ಇದ್ದರು. ಇಡೀ ದಿನ ಮಹಿಳೆಯರು ದೇವಿಗೆ ನೈವೇದ್ಯ ಅರ್ಪಿಸಿ ಉಡಿ ತುಂಬಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ