Breaking News

ಬೆಳಗಾವಿಯಲ್ಲಿ ದ್ಯಾಮಮ್ಮ, ದುರಗಮ್ಮ ದೇವಿ ಜಾತ್ರೆ , ಭಂಡಾರದೋಕುಳಿಯಲ್ಲಿ ಸಂಭ್ರಮಿಸಿದ ಭಕ್ತರು

Spread the love

ಬೆಳಗಾವಿ ಜಿಲ್ಲೆ ಕಿತ್ತೂರು ಕೋಟೆಯ ಗ್ರಾಮ ದೇವತೆಗಳಾದ ದ್ಯಾಮಮ್ಮ, ದುರಗಮ್ಮ ದೇವಿ ಜಾತ್ರೆಯನ್ನ ದಶಮಾನಗಳ ಬಳಿಕ ಈಗ ಆಚರಿಸಲಾಗ್ತಿದೆ. ಮೇ 4 ರಿಂದ ಜಾತ್ರೆ ಶುರುವಾಗಿದ್ದು, 7 ಹಳ್ಳಿಗಳ ಗ್ರಾಮಸ್ಥರು ಪಲ್ಲಕ್ಕಿಯನ್ನ ಕಿತ್ತೂರಿಗೆ ತಂದ್ರು. ಉತ್ಸವದ ವಿಶೇಷತೆ ಅಂದ್ರೆ ಭಂಡಾರ ಎರಚುತ್ತಾ ಭಕ್ತರು ಹೊನ್ನಾಟದಲ್ಲಿ ತೊಡಗಿ ಭಕ್ತಿ ಅರ್ಪಿಸಿದ್ರು. ಬೆಳಗಾವಿಯ ಜಾತ್ರೆ ಇಷ್ಟಾದ್ರೆ ಕೋಟೆನಾಡಲ್ಲೂ ಕುಲದೇವಿಯ ಉತ್ಸವ ಅದ್ಧೂರಿಯಾಗಿ ನಡೆದಿತ್ತು.

ಭಂಡಾರದೋಕುಳಿಯಲ್ಲಿ ಸಂಭ್ರಮಿಸಿದ ಭಕ್ತರು

ಚಿತ್ರದುರ್ಗದಲ್ಲಿ ಕೋಟೆ ಆಳಿದ ಪಾಳೇಗಾರರ ಕುಲದೇವತೆ ಉತ್ಸವಾಂಬಾ ದೇವಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಏಳುಸುತ್ತಿನ ಕೋಟೆ ರಸ್ತೆಯಲ್ಲಿ ದೇವಿ ಉತ್ಸವ ಮೂರ್ತಿಯನ್ನ ಮೆರವಣಿಗೆ ಮಾಡಿದ್ರು. ಎತ್ತಿನ ಬಂಡಿಯಲ್ಲಿ ರಥೋತ್ಸವ ಮಾಡಿ ಪಾಳೇಗಾರರ ಆರಾಧ್ಯ ದೇವಿಗೆ ಭಕ್ತಿ ಅರ್ಪಿಸಿದ್ರು. ಯುಗಾದಿ ಹಬ್ಬವಾದ 1ತಿಂಗಳ ಬಳಿಕ ದೇವಿ ಜಾತ್ರೆ ನಡೆದಿದ್ದು, ಭಕ್ತರು ಹರಕೆ ಕೂಡ ಸಲ್ಲಿಸಿದ್ರು. ರಾಜ ಮನೆತನದವರು ಆಳಿದ ಕಿತ್ತೂರು ಮತ್ತು ಚಿತ್ರದುರ್ಗದಲ್ಲಿ ಕುಲದೇವರ ಜಾತ್ರೆ ಅದ್ಧೂರಿಯಾಗಿ ನಡೆದಿದೆ. ಕೊವಿಡ್ನಿಂದ ಮಂಕಾಗಿದ್ದ ಜಾತ್ರೆಗಳಿಗೆ ಮತ್ತೆ ಜೀವಕಳೆ ಬಂದಿದೆ.


Spread the love

About Laxminews 24x7

Check Also

ಘಟಪ್ರಭಾದಲ್ಲಿ ತಹಶೀಲ್ದಾರರಿಂದ ಸಮೀಕ್ಷೆ ಕಾರ್ಯ!

Spread the love ಘಟಪ್ರಭಾದಲ್ಲಿ ತಹಶೀಲ್ದಾರರಿಂದ ಸಮೀಕ್ಷೆ ಕಾರ್ಯ! ಘಟಪ್ರಭಾ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾಗುತ್ತಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ