Breaking News

450 ರೂ.ಗೆ 1 ಲೀಟರ್‌ ಕ್ರಿಮಿನಾಶಕ ಖರೀದಿಸಿದ್ದ ಸಂತೋಷ್

Spread the love

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಲಭಿಸಿದ್ದು, ಆತ್ಮಹತೆಗೂ ಮುನ್ನ ತಾನೇ ಕ್ರಿಮಿನಾಶಕ ಔಷಧ ಖರೀದಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಉಡುಪಿಯ ಶಾಂಭವಿ ಹೋಟೆಲ್‌ ನಲ್ಲಿ ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಮುನ್ನ ಚಿಕ್ಕಮಗಳೂರಿನಲ್ಲಿ 450 ರೂ.

ನೀಡಿ 1 ಲೀಟರ್‌ ಕ್ರಿಮಿನಾಶಕ ಖರೀದಿಸಿದ್ದರು ಎಂದು ತನಿಖೆಯ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ತಿಳಿದು ಬಂದಿದೆ.

ತಾನೇ ಖರೀದಿಸಿದ್ದ ಕ್ರಿಮಿನಾಶಕವನ್ನು ಶಾಂಭವಿ ಲಾಡ್ಜ್‌ ನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಳೆ ಹುಳುಗಳನ್ನು ಕೊಲ್ಲಲು ಬಳಸುವ ಕ್ರಿಮಿನಾಶಕವನ್ನು ಸಂತೋಷ್‌ ಖರೀದಿಸಿದ್ದು, ರಾತ್ರಿ ಉಡುಪಿ ಲಾಡ್ಜ್‌ ನಲ್ಲಿ ಸ್ನೇಹಿತರ ಜೊತೆಗಿದ್ದಾಗ ಏಕಾಂಗಿಯಾಗಿ ಕೊಠಡಿಗೆ ತೆರಳಿ ನಂತರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ