Breaking News

ಬಯಲಾಟ ಅಕಾಡೆಮಿ ಪ್ರಶಸ್ತಿ ಪ್ರಕಟ; 15 ಸಾಧಕರ ಆಯ್ಕೆ

Spread the love

ಬೆಂಗಳೂರು: ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ 2020-21ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗೆ ರಾಜ್ಯದ ವಿವಿಧ ಬಯಲಾಟ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2022ರ ಏಪ್ರಿಲ್ ಮೊದಲ ವಾರದಲ್ಲಿ ಬಾಗಲಕೋಟೆಯಲ್ಲಿ ಜರುಗಲಿದೆ.

ಗೌರವ ಪ್ರಶಸ್ತಿಯು 50 ಸಾವಿರ ನಗದು ಮತ್ತು ವಾರ್ಷಿಕ ಪ್ರಶಸ್ತಿಯು 25 ಸಾವಿರ ನಗದು ಪುರಸ್ಕಾರ ಒಳಗೊಂಡಿದ್ದು, ಎರಡೂ ವರ್ಗದವರಿಗೆ ಸನ್ಮಾನಿಸಲಾಗುತ್ತದೆ ಎಂದು ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ ಎನ್. ಹೇಮಾವತಿ ತಿಳಿಸಿದ್ದಾರೆ.

ಗೌರವ ಪ್ರಶಸ್ತಿ

ದೊಡ್ಡಾಟ: ಶಾಂತಪ್ಪ ಬಾಡದ-ಬಾಗಲಕೋಟೆ, ಎಂ.ಎಸ್. ಮಾಳವಾಡ-ಧಾರವಾಡ, ಡಿ.ಬಿ. ಶಿವಣ್ಣ-ದಾವಣಗೆರೆ

ಗೊಂಬೆಯಾಟ: ನಾಗಮ್ಮ ಕೃಷ್ಣಯ್ಯ-ಮಂಡ್ಯ

ಸಣ್ಣಾಟ: ಹನುಮಂತಪ್ಪ ಎಲಿಗಾರ-ಕೊಪ್ಪಳ

ವಾರ್ಷಿಕ ಪ್ರಶಸ್ತಿ

ದೊಡ್ಡಾಟ: ರಾಮಶೆಟ್ಟಿ ಬಂಬುಳಗೆ-ಬೀದರ್ , ರಾಮಪ್ಪ ಕುರಬರ-ಹಾವೇರಿ, ಜಿ. ವೀರನಗೌಡ-ಬಳ್ಳಾರಿ.

ಸಣ್ಣಾಟ: ನಾಗಪ್ಪ ಸೂರ್ಯವಂಶಿ-ಬೆಳಗಾವಿ, ನಿಂಗೌಡ ಪಾಟೀಲ-ಬೆಳಗಾವಿ, ಪಾರಿಜಾತ- ದುರುಗವ್ವ- ಬಾಗಲಕೋಟೆ, ಶಿವಪ್ಪ ಕುಂಬಾರ-ಬೆಳಗಾವಿ

ಬಯಲಾಟ: ರೇವಗೊಂಡ ಸಿದರಾಮ ಬಿರಾದರ-ವಿಜಯಪುರ, ಕೆ. ಹೇಮಾರೆಡ್ಡಿ-ಬಳ್ಳಾರಿ

ತೊಗಲು ಗೊಂಬೆಯಾಟ: ಡಾ.ಟಿ. ಗೋವಿಂದರಾಜು-ಬೆಂಗಳೂರು ನಗರ

ಶಾಲೆಗೆ ಹೋಗು ಎಂದಿದ್ದಕ್ಕೆ ಸತ್ತೇ ಹೋದ್ಲು ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ!

ದೊಡ್ಡಾಟ: ಶಾಂತಪ್ಪ ಬಾಡದ-ಬಾಗಲಕೋಟೆ, ಎಂ.ಎಸ್. ಮಾಳವಾಡ-ಧಾರವಾಡ, ಡಿ.ಬಿ. ಶಿವಣ್ಣ-ದಾವಣಗೆರೆ

ಗೊಂಬೆಯಾಟ: ನಾಗಮ್ಮ ಕೃಷ್ಣಯ್ಯ-ಮಂಡ್ಯ

ಸಣ್ಣಾಟ: ಹನುಮಂತಪ್ಪ ಎಲಿಗಾರ-ಕೊಪ್ಪಳ

ದೊಡ್ಡಾಟ: ರಾಮಶೆಟ್ಟಿ ಬಂಬುಳಗೆ-ಬೀದರ್ , ರಾಮಪ್ಪ ಕುರಬರ-ಹಾವೇರಿ, ಜಿ. ವೀರನಗೌಡ-ಬಳ್ಳಾರಿ.

ಬಯಲಾಟ: ರೇವಗೊಂಡ ಸಿದರಾಮ ಬಿರಾದರ-ವಿಜಯಪುರ, ಕೆ. ಹೇಮಾರೆಡ್ಡಿ-ಬಳ್ಳಾರಿ

ತೊಗಲು ಗೊಂಬೆಯಾಟ: ಡಾ.ಟಿ. ಗೋವಿಂದರಾಜು-ಬೆಂಗಳೂರು ನಗರ


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ