Breaking News

ಸಾಲ ಪಡೆದು ಜೀಪ್​ ಕೊಡಿಸಿದ್ದ ಅಮ್ಮ..ಅದೇ ವಾಹನ ಹತ್ತಿಸಿ ತಾಯಿಯ ಕೊಂದ ಮಗ

Spread the love

ಮೈಸೂರು: ವಾಹನ​ ತೆಗೆದುಕೊಳ್ಳಲು ಕೊಡಿಸಿದ ಸಾಲದ ಕಂತು ತುಂಬುವ ವಿಚಾರಕ್ಕೆ ಜಗಳ ನಡೆದು ಮಗನೇ ತಾಯಿಯನ್ನು ಜೀಪ್​ ಹತ್ತಿಸಿ ಕೊಂದಿದ್ದಾನೆ.

ಆರೋಪಿ ಮಗನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಗುರುವಾರ ನಾಗಮ್ಮ (65) ಎಂಬ ಮಹಿಳೆಯನ್ನು ಆಕೆಯ ಮಗ ಹೇಮರಾಜ್(45) ಎಂಬಾತನೇ ಜೀಪ್​ ಹತ್ತಿಸಿ ಕೊಲೆ ಮಾಡಿದ್ದ. ಹಣಕಾಸು ವಿಚಾರವಾಗಿ ತಾಯಿಯನ್ನು ಜೀಪ್‌ನಿಂದ ಗುದ್ದಿ ಕೊಲೆ ಮಾಡಿದ ಪಾಪಿ ಪುತ್ರನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.


Spread the love

About Laxminews 24x7

Check Also

ಬಿಎಂಐಸಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

Spread the loveಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್‌ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಮೂಲ ಸೌಕರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ