Breaking News

ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ ಕೇಸ್​: ಚಿಕ್ಕಮನ ಜತೆ ಅಕ್ರಮ ಸಂಬಂಧ,

Spread the love

ಕಲಬುರಗಿ: ಫೋಟೊಗ್ರಾಫರ್ ಶಿವಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸರು ಐವರು ಹಂತಕರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಾಂತೇಶ್ ಆಳಂದಕರ್, ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಹಾಗೂ ಅಶೋಕ ಜಮಾದಾರ್​ ಎಂದು ಗುರುತಿಸಲಾಗಿದೆ.

 

ಕೊಲೆಯಾದ ಶಿವಕುಮಾರ್, ಆರೋಪಿ ಮಹಾಂತೇಶ್​ ತಾಯಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ವರಸೆಯಲ್ಲಿ ಇಬ್ಬರು ಸಹೋದರರು. ಮಹಾಂತೇಶ್​ಗೆ ಶಿವಕುಮಾರ್​ ದೊಡ್ಡಪ್ಪನ ಮಗನಾಗಬೇಕು. ಚಿಕ್ಕಮ್ಮನ ಜತೆಯಲ್ಲೇ ಅಕ್ರಮ ಸಂಬಂಧ ಹೊಂದಿದ್ದನ್ನು ಮಹಾಂತೇಶ್​ ಕಣ್ಣಾರೆ ಕಂಡಿದ್ದ.

  ಮಹಾಂತೇಶ್ ಆಳಂದಕರ್   ಬಸವರಾಜ್ ಸಲಗಾರ್ ,   ಅಶೋಕ ಜಮಾದಾರ್   ಫಕರಿಪ್ಪ ಸಲಗಾರ್   ಸಿದ್ದಾರೂಢ ಕೋರಬಾರ್ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ದೊಡ್ಡಪ್ಪನ ಮಗನ ಮೇಲೆ ಸೇಡು ತಿರಿಸಿಕೊಳ್ಳಲು ಮಾವ ಬಸವರಾಜ್ ಜತೆ ಸೇರಿಕೊಂಡು ಶಿವಕುಮಾರ್​ ಕೊಲೆಗೆ ಮಹಾಂತೇಶ್​ ಸಂಚು ರೂಪಿಸಿದ್ದ. ಜನವರಿ 25 ರಂದು ಆಳಂದ ತಾಲ್ಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್​ನನ್ನು ಬೈಕ್ ಮೇಲೆ‌ ಕರೆದುಕೊಂಡು ಬಂದಿದ್ದ ಮಹಾಂತೇಶ್, ಕೊಲೆ ಮಾಡಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಯ ಮೇಲೆ ಬಿಸಾಕಿ ಎಸ್ಕೇಪ್ ಆಗಿದ್ದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ