Breaking News

ರೈತರ ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ: ಎಸ್‌.ಟಿ.ಸೋಮಶೇಖರ್‌

Spread the love

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್‌ ಹಾವಳಿಯು ರೈತರ ಸಾಲ ವಿತರಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು 30 ಲಕ್ಷ ರೈತರಿಗೆ ಸಾಲ ವಿತರಣೆಗಾಗಿ ಡಿಸಿಸಿ ಬ್ಯಾಂಕ್‌ಗಳಿಗೆ ಗುರಿ ನೀಡಲಾಗಿದೆ.

ಜತೆಗೆ, ರೈತರು ಸಾಲಕ್ಕಾಗಿ ಹೆಸರು ನೋಂದಣಿ ಮಾಡಿ ಕೊಳ್ಳಲು ಹೊಸ ಸಾಫ್ಟ್ವೇರ್‌ನಲ್ಲಿ ತೊಂದರೆಯಾಗುತ್ತಿದ್ದ ಕಾರಣ ಮಾರ್ಚ್‌ 31ರ ವರೆಗೆ ಹಳೆ ಪದ್ಧತಿ ಯಲ್ಲೇ ಅವಕಾಶ ಕಲ್ಪಿಸಲಾಗಿದೆ.

 

ಪ್ರಸ್ತುತ 19.04 ಲಕ್ಷ ರೈತರಿಗೆ 13,347 ಸಾವಿರ ಕೋ. ರೂ. ಸಾಲ ವಿತರಣೆಯಾಗಿದ್ದು, ಜನವರಿ ಅಂತ್ಯಕ್ಕೆ 20 ಲಕ್ಷ ರೈತರಿಗೆ ಹಾಗೂ ಜೂನ್‌ ಒಳಗೆ 30 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ವಿತರಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಡಿಸಿಸಿ ಸಭೆಯಲ್ಲೂ ನಿರ್ಧಾರ
ಬೆಳೆ ಸಾಲ ವಿಷಯದಲ್ಲಿ ಯಾವುದೇ ಆತಂಕ ಮೂಡದಂತೆ ನೋಡಿಕೊಳ್ಳಲು ಡಿಸಿಸಿ ಬ್ಯಾಂಕ್‌ಗಳ ಅಧ್ಯಕ್ಷರ ಸಭೆಯಲ್ಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ವರ್ಷಗಳ ಮಾಸಿಕವಾರು ಬೆಳೆ ಸಾಲ ಬೇಡಿಕೆಯ ಮಾಹಿತಿ ಆಧಾರದಲ್ಲಿ ಯಾವ್ಯಾವ ತಿಂಗಳಿಗೆ ಎಷ್ಟೆಷ್ಟು ಸಾಲದ ಅಗತ್ಯವಿದೆ ಎಂದು ಸಿದ್ಧಪಡಿಸಿರುವ ಪಟ್ಟಿ ಪ್ರಕಾರ ಸಾಲ ವಿತರಣೆ ಬಗ್ಗೆ ನಿಗಾ ವಹಿಸಲು ನಿರ್ದೇಶನ ನೀಡಲಾಗಿದೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ